masthmagaa.com:
ತನ್ನ ಹಳ್ಳಿಗೆ ಶುದ್ದ ನೀರು ಪೂರೈಸಬೇಕೆಂಬ ಬೇಡಿಕೆಯೊಂದಿಗೆ 225 ಕಿಮೀ ದೂರ ಅರುಣಾಚಲದ ಯುವಕನೊಬ್ಬ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದಾನೆ. ಸೊಲ್ ಡೋಡಮ್ ಅನ್ನೊ ಈ ವ್ಯಕ್ತಿ ಅವ್ನ ಹುಟ್ಟೂರಾದ ಸೆಪ್ಪಾದಿಯಿಂದ ಏಪ್ರೀಲ್ 15 ರಂದು ನಡೆಯೋಕೆ ಆರಂಭಿಸಿದ್ರು. ನಂತ್ರ ಸೋಮವಾರ ಸಂಜೆ ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರವನ್ನ ತಲುಪಿದ್ದಾನೆ. ಅಲ್ಲಿ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಬೇಕು ಅಂತ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾನೆ. ಜೊತೆಗೆ ಸೆಪ್ಪಾದಲ್ಲಿ ಕುಡಿಯುವ ನೀರಿನ ಯೋಜನೆಗಳಲ್ಲಿ ವಿಳಂಬ ಮಾಡ್ತಿರೊದು ಭ್ರಷ್ಟಾಚಾರ ಆಗ್ತಿರೋದ್ರ ಬಗ್ಗೆ ಸರ್ಕಾರಕ್ಕೆ ಗೊತ್ತಾಗ್ಬೇಕು. ಅದಕ್ಕಾಗಿ ನಾನು ಪ್ರಜಾಪ್ರಭುತ್ವ ಮತ್ತು ಶಾಂತಿಯುತ ಮಾರ್ಗವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ ಅಂತ ಹೇಳಿದ್ದಾನೆ.
-masthmagaa.com
Contact Us for Advertisement