masthmagaa.com:
ಲಿಕ್ಕರ್ ಪಾಲಿಸಿ ಕೇಸ್ಗೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪದಲ್ಲಿ ಇಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವ್ರು ಸಿಬಿಐ ಮುಂದೆ ಹಾಜರಾಗಿದ್ದಾರೆ. ಈ ವೇಳೆ ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಕೇಜ್ರಿವಾಲ್ ಜೊತೆಯಲ್ಲಿ ತೆರಳಿದ್ದಾರೆ. ಇತ್ತ ಸಿಬಿಐ ಕಚೇರಿ ಎದುರು ಪ್ರತಿಭಟನೆ ಮಾಡ್ತಿದ್ದ ಆಪ್ ನಾಯಕರಾದ ರಾಘವ್ ಚಡ್ಡಾ ಹಾಗು ಸಂಜಯ್ ಸಿಂಗ್ ಸೇರಿದಂತೆ ಕೆಲವು ಆಪ್ ನಾಯಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೊಂದ್ ಕಡೆ ಮಾಜಿ ಸಂಸದ ವಿವೇಕಾನಂದರೆಡ್ಡಿ ಹತ್ಯೆ ಕೇಸ್ಗೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಸಿಎಂ ಜಗನ್ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ಭಾಸ್ಕರ್ ರೆಡ್ಡಿಯವರನ್ನು ಬಂಧಿಸಲಾಗಿದೆ
-masthmagaa.com
Contact Us for Advertisement