ಬಿಜೆಪಿ ಸೇರಲು ಬಲವಂತ! ಬಿಜೆಪಿ ವಿರುದ್ಧ ಕೇಜ್ರಿವಾಲ್‌ ಆರೋಪ!

masthmagaa.com:

ನನ್ನನ್ನ ಬಿಜೆಪಿಗೆ ಸೇರಿಕೊಳ್ಳೋದಕ್ಕೆ ಒತ್ತಾಯ ಮಾಡಲಾಗಿದೆ ಅಂತ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಆರೋಪ ಮಾಡಿದ್ದಾರೆ. ದೆಹಲಿಯಲ್ಲಿ ನಡೆದ ಈವೆಂಟ್‌ ಒಂದ್ರಲ್ಲಿ ಮಾತನಾಡಿದ ಅವ್ರು ʻಬಿಜೆಪಿ ನಮ್ಮ ವಿರುದ್ಧ ಅದೆಷ್ಟೇ ಪಿತೂರಿ ಮಾಡ್ಬೋದು, ಕುತಂತ್ರ ನಡೆಸ್ಬೋದು. ಆದ್ರೆ ನನ್ನನ್ನ ಬಗ್ಗಿಸೋಕೆ ಸಾಧ್ಯ ಇಲ್ಲ. ಅವ್ರು ಈಗ ನನಗೆ ಬಿಜೆಪಿಗೆ ಸೇರೋಕೆ ಕೇಳಿದ್ದಾರೆ, ನಾನ್‌ ಮಾತ್ರ ಬಿಜೆಪಿ ಸೇರೋಕೆ ಚಾನ್ಸೇ ಇಲ್ಲ, ಯಾವತ್ತೂ ಸಾಧ್ಯವಿಲ್ಲ ಅಂತ ಹೇಳ್ಬಿಟ್ಟೆʼ ಅಂದಿದ್ದಾರೆ. ಅಂದ್ಹಾಗೆ ಇತ್ತೀಚೆಗಷ್ಟೇ ತಮ್ಮ 21 ಸಂಸದರಿಗೆ ಬಿಜೆಪಿ ಗಾಳ ಹಾಕೋಕೆ ಟ್ರೈ ಮಾಡಿತ್ತು. ಆಮ್‌ ಆದ್ಮಿ ಪಾರ್ಟಿಯ ಸಂಸದರನ್ನ ಬಿಜೆಪಿ ಸಂಪರ್ಕಿಸಿತ್ತು ಅಂತ ಕೇಜ್ರಿವಾಲ್ ಹೇಳಿದ್ರು.

-masthmagaa.com

Contact Us for Advertisement

Leave a Reply