ರಾಮ ಮಂದಿರ ದೇಶದ ಪ್ರತಿಯೊಬ್ಬರಿಗೂ ಹೆಮ್ಮೆ ಸಂಗತಿ: ಕೇಜ್ರಿವಾಲ್!

masthmagaa.com:

ʻʻರಾಮ ಮಂದಿರ ಉದ್ಘಾಟನೆಯಾಗಿದ್ದು ದೇಶದ ಪ್ರತಿಯೊಬ್ಬರಿಗೂ ಹೆಮ್ಮೆಯ ಸಂಗತಿʼʼ ಅಂತ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. ಜೊತೆಗೆ ದೆಹಲಿಯಲ್ಲಿ ರಾಮರಾಜ್ಯ ಆಡಳಿತ ಪರಿಕಲ್ಪನೆಗಾಗಿ 10 ಕ್ರಮಗಳನ್ನ ಘೋಷಿಸಿದ್ದಾರೆ. ಹಸಿವು ಮುಕ್ತ ರಾಜ್ಯ ನಿರ್ಮಾಣದ ಗುರಿ, ಸಮಾನ ಹಾಗೂ ಉಚಿತ ಶಿಕ್ಷಣ, ಆಸ್ಪತ್ರೆಗಳ ಸುಧಾರಣೆ, 24 ಗಂಟೆ ವಿದ್ಯುತ್‌ ನೀಡೊದು ಸೇರಿ ಅನೇಕ ಕ್ರಮಗಳನ್ನ ಕೈಗೊಳ್ಳೋದಾಗಿ ಘೋಷಿಸಿದ್ದಾರೆ. ಅಲ್ಲದೇ ನ್ಯೂಯಾರ್ಕ್‌, ಲಂಡನ್‌ ಮಹಾನಗರಗಳಿಗಿಂತ ದೆಹಲಿಯಲ್ಲಿ ಹೆಚ್ಚಿನ ಭದ್ರತೆಗಾಗಿ ಹೆಚ್ಚಿನ CCTV ಗಳನ್ನ ಅಳವಡಿಸಲಾಗಿದೆ ಅಂತ ಕೇಜ್ರಿವಾಲ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply