ಗೋಮಾಂಸ ವಿವಾದದ ಕಿಡಿ: ವ್ಯಾಪಾರಿಗೆ ಹತ್ಯೆ ಮುಂದುವರೆಸಿ ಅಂದ ಓವೈಸಿ!

masthmagaa.com:

ಹೈದ್ರಾಬಾದ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ AIMMM ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಗೋಮಾಂಸ ಅಂಗಡಿಗೆ ಜಿಂದಾಬಾದ್‌ ಅಂತೇಳಿರೋ ವಿಡಿಯೋ ವಿವಾದದ ಕಿಡಿ ಹೊತ್ತಿಸಿದೆ. ಓಲ್ಡ್‌ ಹೈದ್ರಾಬಾದ್‌ ಸಿಟಿಯಲ್ಲಿ ಪ್ರಚಾರದ ವೇಳೆ ದಾರಿಯಲ್ಲಿ ರೆಹಾನ್‌ ಬೀಫ್‌ ಶಾಪ್‌ ಜಿಂದಾಬಾದ್‌ ಅಂತೇಳಿ ಅಂಗಡಿ ಮಾಲೀಕನಿಗೆ ಕೈಯಲ್ಲಿ ನೀವು ಹತ್ಯೆ ಮಾಡ್ತಾನೆ ಇರಿ ಅಂತೇಳಿದ್ರು. ಈ ವಿಡಿಯೋ ವೈರಲ್‌ ಆಗ್ತಿದ್ದಂತೆ ಬಿಜೆಪಿ ಆಕ್ಷೇಪ ವ್ಯಕ್ತ ಪಡಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಾತನಾಡಿ ಓವೈಸಿ ಸಹೋದರರಿಬ್ರ ಹೇಳಿಕೆಗಳು ಯಾವಾಗ್ಲೂ ವಿಷಪೂರಿತ ಮತ್ತು ಅಸಭ್ಯವಾಗಿರುತ್ವೆ. ಇಂತಹ ಹೇಳಿಕೆಗಳನ್ನ ಕೊಡೊದ್ರಲ್ಲಿ ಅವ್ರಿಬ್ರು ನಿಪುಣರು ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply