masthmagaa.com:
ಬಾಲಿವುಡ್ ನಟ ಶಾರುಖ್ ಖಾನ್ ಅವ್ರ ʻಪಠಾಣ್ʼ ಸಿನಿಮಾ ಬಿಡುಗಡೆ ವಿರೋಧಿಸಿ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಅಸ್ಸಾಂನ ಗುವಾಹಟಿಯಲ್ಲಿರೋ ಥಿಯೇಟರ್ ಬಳಿ ಬಜರಂಗ್ ದಳ ಹಿಂಸಾತ್ಮಕ ಪ್ರತಿಭಟನೆ ನಡೆಸಿದೆ. ಈ ವೇಳೆ ಶಾರುಖ್ ಖಾನ್ ಯಾರು ಅಂತನೇ ನನಗೆ ಗೊತ್ತಿಲ್ಲ. ಹಾಗೂ ಅವರ ಚಿತ್ರ ʻಪಠಾಣʼ ಬಗ್ಗೆಯೂ ನನಗೆ ತಿಳಿದಿಲ್ಲ ಅಂತ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮ ಹೇಳಿದ್ರು. ಆದ್ರೆ ಇದೀಗ ಶಾರುಖ್ ಖಾನ್ ನನಗೆ ಕಾಲ್ ಮಾಡಿದ್ರು, ತಮ್ಮ ಚಿತ್ರ ರಿಲೀಸ್ ಆಗ್ತಿರೋ ಥಿಯೇಟರ್ ಬಳಿ ಉಂಟಾಗಿದ್ದ ಗಲಾಟೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡೋದು ರಾಜ್ಯ ಸರ್ಕಾರದ ಕರ್ತವ್ಯ ಅಂತ ನಾನು ಅವ್ರಿಗೆ ಭರವಸೆ ನೀಡಿದ್ದೇನೆ. ಹಾಗೂ ಈ ಬಗ್ಗೆ ವಿಚಾರಣೆ ನಡೆಸುತ್ತೇವೆ ಮತ್ತು ಇಂತಹ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ತೇವೆ ಅಂತ ಹಿಮಂತ್ ಹೇಳಿದ್ದಾರೆ.
-masthmagaa.com
Contact Us for Advertisement