masthmagaa.com:
ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರೊ ಶ್ರೀರಾಮ ಮಂದಿರವನ್ನ ಸ್ಪೋಟಿಸೋದಾಗಿ ಬೆದರಿಕೆ ಇದೆ. ಉಗ್ರಸಂಘಟನೆಯೊಂದು ಆತ್ಮಾಹುತಿ ದಾಳಿ ಮಾಡಿ ರಾಮಮಂದಿರವನ್ನ ಸ್ಪೋಟಿಸೋಕೆ ಪ್ಲ್ಯಾನ್ ಹಾಕಿಕೊಂಡಿದೆ ಅಂತ ತನಿಖಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಅದ್ರಲ್ಲೂ ಜನವರಿ 26ರ ಗಣರಾಜ್ಯ ದಿನದಂದು ಈ ಸ್ಪೋಟ ಮಾಡೋದಾಗಿ ಉಗ್ರರು ಯೋಜಿಸಿದ್ದಾರೆ ಅಂತ ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ 26ರಂದು ದಿಲ್ಲಿಯಲ್ಲಿ ಹಾಗೂ ದೇಶದ ಪ್ರಮುಖ ಸ್ಥಳಗಳಲ್ಲಿ ಹೈ ಅಲರ್ಟ್ ಘೋಷಿಸಿ ಭದ್ರತೆಯನ್ನ ಹೆಚ್ಚಿಸಲಾಗುವುದು ಅಂತ ಸರ್ಕಾರ ಹೇಳಿದೆ.
-masthmagaa.com
Contact Us for Advertisement