ಬಾಬ್ರಿ ಮಸೀದಿ ʻಗುಲಾಮಗಿರಿಯ ಸಂಕೇತʼ! RSS ಮುಖ್ಯಸ್ಥ ಹೇಳಿಕೆ!

masthmagaa.com:

ರಾಮಮಂದಿರ ವಿಚಾರವಾಗಿ RSS ಮುಖ್ಯಸ್ಥ ಮೋಹನ್‌ ಭಾಗವತ್‌ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಬಾಬ್ರಿ ಮಸೀದಿ ʻಗುಲಾಮಗಿರಿಯ ಸಂಕೇತʼವಾಗಿತ್ತು ಅಂತ ಭಾಗವತ್ ಹೇಳಿದ್ದಾರೆ.‌ ʻಶ್ರೀರಾಮಮಂದಿರ ನಿರ್ಮಾಣದಿಂದ ಹಲವಾರು ವರ್ಷಗಳ ಕನಸು ಕೊನೆಗೂ ನನಸಾಗಿದೆ. ಈ ಹಿಂದೆ ಅಯೋಧ್ಯೆಯಲ್ಲಿ ಗುಲಾಮಗಿರಿಯ ಸಂಕೇತದಂತಿದ್ದ ಬಾಬ್ರಿ ಮಸೀದಿಯನ್ನ ದ್ವಂಸ ಮಾಡಲಾಯ್ತು. ಆದ್ರೆ ಅಲ್ಲಿದ್ದ ಬೇರಾವುದೇ ಮಸೀದಿಯನ್ನ ನಾವು ಮುಟ್ಲಿಲ್ಲ. ಕರಸೇವಕರು ಬೇರೆಲ್ಲೂ ಗಲಭೆ ಕೂಡ ಮಾಡ್ಲಿಲ್ಲ. ಈಗ ಮಂದಿರ ನಿರ್ಮಾಣ ಆಗಿರೋದು ಬಹಳ ಖುಷಿ ತಂದಿದೆ. ಆದ್ರೆ ಕೆಲಸ ಇಲ್ಲಿಗೆ ಮುಗಿದಿಲ್ಲ. ದೇವಸ್ಥಾನ ಕಟ್ಟೋಕೆ ಕೈಗೊಂಡಿರೋ ಶ್ರಮ, ನಮ್ಮ ಗುರಿ ತಲುಪೋ ವರೆಗೂ ಇರ್ಬೇಕು ಅಂತ ಕರೆಕೊಟ್ಟಿದ್ದಾರೆ. ಅಲ್ಲದೆ, ನಮ್ಮಲ್ಲಿ ಹಲವಾರು ಭಾಷೆಗಳು, ದೇವರುಗಳು, ಅನೇಕ ಧರ್ಮಗಳು ಇರ್ಬೋದು. ಆದ್ರೆ ಪ್ರತಿ ಭಾರತೀಯನು ಪ್ರಪಂಚ ನಮ್ಮನ್ನ ನೋಡಿ ಕಲಿಯೋ ತರ ಜೀವನ ಮಾಡ್ಬೇಕು ಅಂದಿದ್ದಾರೆ.

-masthmagaa.com:

 

Contact Us for Advertisement

Leave a Reply