masthmagaa.com:
ಹಿಜಬ್, ಹಲಾಲ್, ಆಜಾನ್ ಬಳಿಕ ಈಗ ರಾಜ್ಯದಲ್ಲಿ ಮದರಸಗಳಲ್ಲಿ ರಾಷ್ಟ್ರಗೀತೆ ಹಾಡೋ ಬಗ್ಗೆ ಮತ್ತೊಂದು ಸುತ್ತಿನ ವಾದವಿವಾದ ಎದ್ದಿದೆ. ಮದರಸಗಳಲ್ಲಿ ರಾಜ್ಯ ಸಿಲೇಬಸ್ ಇರಲ್ಲ, ರಾಷ್ಟ್ರಗೀತೆನೂ ಹಾಡಲ್ಲ ಆದ್ರೆ ಸರ್ಕಾರದ ಅನುದಾನ ಮಾತ್ರ ಪಡೆಯುತ್ತೆ. ಅದಕ್ಕೆ ಅವುಗಳನ್ನ ಬ್ಯಾನ್ ಮಾಡ್ಬೇಕು. ಇಲ್ಲ ರಾಷ್ಟ್ರಗೀತೆ ಹಾಡುವಂತೆ ಆದೇಶ ಮಾಡ್ಬೇಕು ಅಂತ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಅಂದ್ಹಾಗೆ ರಾಜ್ಯದಲ್ಲಿ 968 ಮದರಸಾಗಳಿಗೆ ಸರ್ಕಾರದಿಂದ ಅನುದಾನ ಹೋಗ್ತಾ ಇದ್ದು 394 ಮದರಸಾಗಳು ವಕ್ಫ್ ಬೋರ್ಡ್ ಅಂಡರ್ನಲ್ಲಿವೆ.
-masthmagaa.com
Contact Us for Advertisement