BBMP ನಿರ್ಲಕ್ಷ: ಬೆಂಗಳೂರಿನಲ್ಲಿ ಉದ್ಘಾಟನೆ ಭಾಗ್ಯ ಕಾಣದ ʻಬಸವಣ್ಣʼ

masthmagaa.com:

ಬೆಂಗಳೂರಿನಲ್ಲಿ ಕಳೆದೆರಡು ವರ್ಷದಿಂದ ಬಸವಣ್ಣನವರ ಪ್ರತಿಮೆಯೊಂದನ್ನ ಉದ್ಘಾಟನೆ ಮಾಡದೆ ಟಾರ್ಪಲ್‌ ಹೊದಿಸಿ ನಿಲ್ಲಿಸಲಾಗಿದೆ. ರಾಜಾಜಿ ನಗರದ ನವರಂಗ ಬ್ರಿಡ್ಜ್‌ ಬಳಿ ಇರೋ ಬಸವ‍ಣ್ಣನವರ ಪ್ರತಿಮೆಗೆ BBMP ಈ ರೀತಿ ಅಗೌರವ ತೋರಿದೆ. ಇನ್ನು ಈ ನಿರ್ಲಕ್ಷದ ವಿರುದ್ದ ಆಕ್ರೋಶಗೊಂಡಿರೋ ಸಿದ್ದಗಂಗಾ ಶ್ರೀಗಳ ಭಕ್ತ ಸೇವಾ ಸಮಿತಿ ಪ್ರತಿಮೆ ಅನಾವರಣಗೊಳಿಸಲು BBMP ಗೆ ಫೆಬ್ರುವರಿ 16ರ ವರೆಗೆ ಗಡುವು ನೀಡಿದೆ. ಒಂದು ವೇಳೆ ಪ್ರತಿಮೆ ಅನಾವರಣ ಆಗದಿದ್ರೆ ನಾವೇ ಬಸವಣ್ಣನವರ ಪ್ರತಿಮೆ ಅನಾವರಣ ಮಾಡ್ತೀವಿ ಅಂತ ಎಚ್ಚರಿಕೆ ನೀಡಿದೆ. ಇತ್ತೀಚಿಗಷ್ಟೆ ಬಸವಣ್ಣನವರನ್ನ ರಾಜ್ಯದ ಸಾಂಸ್ಕೃತಿಕ ರಾಯಭಾರಿ ಅಂತ ರಾಜ್ಯ ಸರ್ಕಾರ ಘೋಷಿಸಿತ್ತು. ಇದೀಗ ಈ ವಿಚಾರ ಬೆಳಕಿಗೆ ಬಂದಿದೆ.

-masthmagaa.com

Contact Us for Advertisement

Leave a Reply