ಟೀಮ್‌ ಇಂಡಿಯಾ ವರ್ಲ್ಡ್‌ಕಪ್‌ ಸೋತಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!

masthmagaa.com:

ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಸೋತಿದ್ದಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಇಲ್ಲಿನ ಬಾಂಕುರ ಜಿಲ್ಲೆಯಲ್ಲಿ‌ ಕ್ರಿಕೆಟ್‌ ಮಾನಿಯಾಕ್‌ ಅಂತಾನೆ ಫೇಮಸ್ಸಾಗಿದ್ದ 23 ವರ್ಷದ ರಾಹುಲ್‌ ಅನ್ನೊ ಯುವಕ ಭಾರತದ ಸೋಲನ್ನು ಸಹಿಸಲಾರದೆ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ನಡೆದ ವೇಳೆ ಮನೆಯಲ್ಲಿ ಬೇರೆ ಯಾರು ಇರಲಿಲ್ಲ ಅಂತ ಪೊಲೀಸರು ಹೇಳಿದ್ದಾರೆ. ಅಸ್ವಾಭಾವಿಕ ಮರಣ ಅಂತ ಕೇಸ್‌ ದಾಖಲಿಸಿಕೊಂಡು, ತನಿಖೆ ನಡೆಸಲಾಗ್ತಿದೆ ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply