masthmagaa.com:
ಬೆಂಗಳೂರಲ್ಲಿ ವಿಚಿತ್ರ ಕೇಸ್ ಒಂದು ದಾಖಲಾಗಿದೆ. ಇಲ್ಲಿನ ಶ್ರೀಕಂಠೇಶ್ವರ ನಗರದ ನಿವಾಸಿ ಶಿವಶಂಕರ್ ಅನ್ನೋ ವ್ಯಕ್ತಿ ತನ್ನ ಪತ್ನಿಯನ್ನ ಕೊಂದು ಆತ್ಮಹತ್ಯೆ ಅಂತ ಬಿಂಬಿಸಿದ್ದ. ಈತ ಫೆಬ್ರವರಿ 2ರಂದು ಪತ್ನಿಯನ್ನ ತನ್ನ ಸ್ನೇಹಿತನ ಸಹಾಯದಿಂದ ಕೊಂದು, ನೇಣುಹಾಕಿ, ಆತ್ಮಹತ್ಯೆ ಅಂತ ಅತ್ತು ಗೋಳಿಟ್ಟಿದ್ದ. ಅಕ್ರಮ ಸಂಬಂಧದ ಶಂಕೆಯಿಂದ 35 ವರ್ಷದ ಪ್ರೇಮಲತಾರನ್ನ ಕೊಂದಿದ್ದ. ಪೊಲೀಸರು ತನಿಖೆ ನಡೆಸಿದಾಗ ಇದು ಅಸ್ವಾಭಾವಿಕ ಮರಣ ಅಂತ ಗೊತ್ತಾಗಿದೆ. ತನಿಖೆ ವೇಳೆ ಶಿವಶಂಕರ್ ಹಾಗೂ ಅವನ ಸ್ನೇಹಿತ ವಿನಯ್ ಒಟ್ಟಿಗೆ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಇದ್ರಲ್ಲಿ ಇಂಟ್ರಸ್ಟಿಂಗ್ ಏನಪ್ಪಾ ಅಂದ್ರೆ ಈ ಸ್ನೇಹಿತ ಇದಾನಲ್ಲ ವಿನಯ್, ಈತ ಕೂಡ ಕಳೆದ ವರ್ಷ ತನ್ನ ಪತ್ನಿಯನ್ನ ಕೊಂದು ಕೆರೆಗೆ ಎಸೆದಿದ್ದನಂತೆ. ಸೋ ಈತ ಆಲ್ರೆಡಿ ಎಕ್ಸ್ಪೀರಿಯನ್ಸ್ಡ್ ಅಂತ ಶಿವಶಂಕರ್ ಈತನ ಹೆಲ್ಪ್ ಪಡೆದಿದ್ದಾನೆ. ಅಲ್ಲದೆ ಹಣ ಬೇರೆ ಕೊಟ್ಟಿದ್ದಾನೆ ಹೆಲ್ಪ್ ಮಾಡೋಕೆ. ಇನ್ನು ಪೊಲೀಸರು ತನಿಖೆ ಮಾಡಿದಾಗ ಇವರ ಬಣ್ಣಗಳು ಬಯಲಾಗಿವೆ. ಪೊಲೀಸರು ಈ ಬಗ್ಗೆ ತನಿಖೆ ಕಂಟಿನ್ಯೂ ಮಾಡಿದ್ದಾರೆ.
-masthmagaa.com
Contact Us for Advertisement