masthmagaa.com:
ಸಿಎಂ ಸಿದ್ಧರಾಮಯ್ಯ ಪ್ರಚಾರದ ವೇಳೆ ಭದ್ರತಾ ವೈಫಲ್ಯ ಆಗಿರುವಂತೆ ತೋರೋ ಘಟನೆಯೊಂದು ನಡೆದಿದೆ. ಪ್ರಚಾರದ ವೇಳೆ ತೆರೆದ ವಾಹನದ ಮೇಲೆ ನಿಂತಿದ್ದ ಸಿಎಂ ಸಿದ್ಧರಾಮಯ್ಯ ಅವ್ರಿಗೆ, ಸೊಂಟಕ್ಕೆ ಪಿಸ್ತೂಲು ನೇತಾಕೊಂಡು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ, ವಾಹನದ ಮೇಲೆ ಹತ್ತಿ ಹಾರ ಹಾಕಿ ಹೋಗಿದ್ದಾನೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸೌಮ್ಯ ರೆಡ್ಡಿ ಪರವಾಗಿ, ನಗರದ ಭೈರಸಂದ್ರದಲ್ಲಿ ಪ್ರಚಾರ ನಡೆಸೋ ಟೈಮಲ್ಲಿ ಈ ಘಟನೆ ನಡೆದಿದೆ. ಇನ್ನು ಈ ರೀತಿ ಹಾರ ಹಾಕಿ ಹೋದ ವ್ಯಕ್ತಿಯನ್ನ ರಿಯಾಜ್ ಅಂತ ಗುರುತಿಸಲಾಗಿದ್ದು, ತನಗೆ ಜೀವಭಯ ಇದೆ ಅಂತ ಈತ ಅರ್ಜಿ ಹಾಕಿ ಪಿಸ್ತೂಲ್ ಪಡೆದುಕೊಂಡಿದ್ದಾನೆ. ಜೊತೆಗೆ ಎಲೆಕ್ಷನ್ ಟೈಮಲ್ಲಿ ಅದನ್ನ ಸರಂಡರ್ ಮಾಡದೇ ಇರೋಕು ಅನುಮತಿ ತಗೊಂಡಿದ್ದಾನೆ. ಆದ್ರೆ Z ಸೆಕ್ಯುರಿಟಿ ಇರೋ ಮುಖ್ಯಮಂತ್ರಿಗಳ ಬಳಿ ಪಿಸ್ತೂಲು ತಗೊಂಡೋಗಿರೋದು, ಸಾರ್ವಜನಿಕವಾಗಿ ಅದನ್ನ ಪ್ರದರ್ಶನ ಮಾಡಿರೋದ್ರಿಂದ. ಪಿಸ್ತೂಲನ್ನ ಮುಟ್ಟುಗೋಲು ಹಾಕಿಕೊಳ್ಳೋಕೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅವ್ರಿಗೆ ಸೂಚನೆ ನೀಡಲಾಗಿದೆ.
-masthmagaa.com
Contact Us for Advertisement