masthmagaa.com:
ಜಿಹಾದಿ ಶಾರುಖ್ ಖಾನ್ ಅವ್ರನ್ನ ಭೇಟಿ ಮಾಡೋ ಅವಕಾಶ ಸಿಕ್ರೆ ನಾನು ಅವ್ರನ್ನ ಜೀವಂತವಾಗಿ ಸುಡುತ್ತೇನೆ ಅಂತ ಅಯೋಧ್ಯೆಯ ಸ್ವಾಮೀಜಿ ಒಬ್ರು ಆಕ್ಷೇಪಾರ್ಹವಾಗಿ ಹೇಳಿರೋದು ಭಾರೀ ಚರ್ಚೆಗೆ ಗುರಿಯಾಗಿದೆ. ಬಾಲಿವುಡ್ ನಟ ಶಾರುಖ್ ಖಾನ್ ನಟಿಸಿರೋ ಪಠಾಣ್ ಚಿತ್ರದ ʻಬೇಷರಂ ರಂಗ್ʼ ಹಾಡು ರಿಲೀಸ್ ಆದಾಗಿನಿಂದ ವಿವಾದ ಉಂಟಾಗಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಇದೀಗ ಅಯೋಧ್ಯೆಯ ಪರಮಹಂಸ ಸ್ವಾಮೀಜಿ ಶಾರುಖ್ ವಿರುದ್ಧ ನೀಡಿರೋ ಹೇಳಿಕೆ ಮತ್ತಷ್ಟು ವಿವಾದ ಸೃಷ್ಟಿಸಿದೆ. ಬೇಷರಂ ಹಾಡಿಗೆ ಪ್ರತಿಕ್ರಿಯೆ ನೀಡಿರೋ ಸ್ವಾಮೀಜಿ, ನಮ್ಮ ಸನಾತನ ಧರ್ಮದ ಜನ್ರು ಈ ವಿಚಾರದ ಬಗ್ಗೆ ನಿರಂತರವಾಗಿ ಪ್ರತಿಭಟಿಸುತಿದ್ದಾರೆ. ಇವತ್ತು ನಾವು ಶಾರುಖ್ ಖಾನ್ ಅವ್ರ ಪೋಸ್ಟರ್ ಅನ್ನ ಸುಟ್ಟು ಹಾಕಿದ್ದೇವೆ. ಏನಾದ್ರೂ ಶಾರುಖ್ ಅನ್ನ ಭೇಟಿ ಮಾಡೋ ಅವಕಾಶ ಸಿಕ್ರೆ ಜೀವಂತವಾಗಿ ಸುಡುತ್ತೇನೆ. ಜೊತೆಗೆ ಪಠಾಣ್ ಚಿತ್ರ ಥಿಯೇಟರ್ನಲ್ಲಿ ರಿಲೀಸ್ ಆದ್ರೆ ನಾನು ಆ ಸಿನಿಮಾ ಮಂದಿರಕ್ಕೆ ಬೆಂಕಿ ಇಡ್ತೇನೆ ಅಂತ ಪರಮಹಂಸ ಸ್ವಾಮೀಜಿಗಳು ಹೇಳಿದ್ದಾರೆ. ಅವ್ರ ಹೇಳಿಕೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.
-masthmagaa.com
Contact Us for Advertisement