ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ: ಕೊಡಿಹಳ್ಳಿ ಚಂದ್ರಶೇಖರ್‌ ಆಕ್ರೋಶ

masthmagaa.com:

ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕ್ತೀವಿ ಅಂತ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ್‌ ಬೆದರಿಕೆ ಹಾಕಿದ್ದಾರೆ. ಡಿಸೆಂಬರ್‌ 4 ರಿಂದ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಸ್ಟಾರ್ಟ್‌ ಆಗಲಿದ್ದು, ಇದ್ರ ಮೊದಲ ದಿನವೇ ಮುತ್ತಿಗೆ ಹಾಕೋದಾಗಿ ಚಂದ್ರಶೇಖರ್‌ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವ್ರು, ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಜಾರಿ ಮಾಡಿ, ನಂತರ ಅದನ್ನ ವಾಪಾಸ್‌ ಪಡ್ಕೊಂಡಿದೆ. ಆದ್ರೆ ರಾಜ್ಯ ಸರ್ಕಾರ ಈ ಕೆಲಸ ಮಾಡ್ಲೇ ಇಲ್ಲ. ಕಾಂಗ್ರೆಸ್‌ ಬಂದಾಗಿನಿಂದ ಒಂದೇ ಒಂದು ರೈತ ಪರ ಯೋಜನೆ ಕೂಡ ಮಾಡಿಲ್ಲ. ಕೃಷಿ ಕಾಯ್ದೆ ವಾಪಾಸ್‌ ಪಡೆಯೋ ತನಕ ಬಿಡಲ್ಲ. ನಿರಂತರ ಹೋರಾಟ ಮಾಡ್ತೀವಿ. ನಮ್ಮನ್ನ ಅರೆಸ್ಟ್‌ ಮಾಡಿದ್ರೂ ಪರವಾಗಿಲ್ಲ, ಸುಮ್ಮನೆ ಕೂತ್ಕೊಳ್ಳೋ ಮಾತೇ ಇಲ್ಲ. ಹೋರಾಟ ಕಂಟಿನ್ಯೂ ಆಗುತ್ತೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply