masthmagaa.com:
ರಾಜಸ್ಥಾನದಲ್ಲಿ ಲಂಪಿ ಚರ್ಮ ರೋಗ ತೀವ್ರವಾಗಿ ಹರಡ್ತಿದೆ. ಈಗಾಗಲೇ ಈ ರೋಗಕ್ಕೆ 57 ಸಾವಿರಕ್ಕಿಂತ ಅಧಿಕ ದನಕರುಗಳು ಸಾವನ್ನಪ್ಪಿವೆ. 11 ಲಕ್ಷ ದನಗಳಿಗೆ ಸೋಂಕು ತಗುಲಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಇಂದು ಪ್ರತಿಭಟನೆ ಮಾಡಿದ್ದಾರೆ. ಬೆಜೆಪಿ ಶಾಸಕರೊಬ್ಬರು ಅಲ್ಲಿನ ವಿಧಾನಸಭೆಯ ಮುಂದೆ ಆಕಳನ್ನ ತಂದು, ಸರ್ಕಾರದ ವಿರುದ್ದ ಘೋಷಣೆ ಕೂಗಿದ್ದಾರೆ. ಇತ್ತ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಲಂಪಿ ರೋಗವನ್ನ ನ್ಯಾಷನಲ್ ಕಲಾಮಿಟಿ ಅಥ್ವಾ ರಾಷ್ಟ್ರೀಯ ವಿಪತ್ತು ಅಂತ ಘೋಷಿಸ್ಬೇಕು ಅಂತ ಕೇಂದ್ರಕ್ಕೆ ಆಗ್ರಹಿಸಿದ್ದಾರೆ.
-masthmagaa.com
Contact Us for Advertisement