ಅತಿಕ್ರಮಣ ವಿರೋಧಿ ಅಭಿಯಾನಕ್ಕೆ ಕೇಜ್ರಿವಾಲ್ ಆಕ್ರೋಶ!

masthmagaa.com:

ದೆಹಲಿಯಲ್ಲಿನ ಅಕ್ರಮ ಕಟ್ಟಡಗಳ ವಿರುದ್ದ ನಡೀತಿರೋ ಅತಿಕ್ರಮಣ ವಿರೋಧಿ ಅಭಿಯಾನಕ್ಕೆ ಸಂಬಂಧಪಟ್ಟಂತೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಸ್ವತಂತ್ರ ಭಾರತದ ಅತಿದೊಡ್ಡ ವಿನಾಶ ಅಂತ ಕಿಡಿಕಾರಿದ್ದಾರೆ. ಈ ಬಗ್ಗೆ ಮಾತನಾಡಿರೋ ಅವ್ರು ದಿಲ್ಲಿಯಲ್ಲಿ 63 ಲಕ್ಷ ಮನೆಗಳನ್ನ ಕೆಡವಲು ಬಿಜೆಪಿ ಸರ್ಕಾರ ಮುಂದಾಗಿದೆ. ಅವ್ರ ʻಬುಲ್ಡೋಜರ್‌ʼ ನೀತಿಯನ್ನ ಆಪ್‌ ಸರ್ಕಾರ ವಿರೋಧಿಸುತ್ತೆ ಅಂತ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅಲ್ದೇ ದಿಲ್ಲಿಯ ಹಲವು ಭಾಗಗಳಲ್ಲಿ ಬಿಜೆಪಿ ನೇತೃತ್ವದ ಮುನ್ಸಿಪಲ್ ಕಾರ್ಪೊರೇಷನ್‌ಗಳು ನಡೆಸುತ್ತಿರೊ ಅತಿಕ್ರಮಣ ವಿರೋಧಿ ಅಭಿಯಾನವನ್ನ ವಿರೋಧಿಸಿ ಜೈಲಿಗೆ ಹೋಗೋಕೆ ರೆಡಿ ಇರ್ಬೇಕು ಅಂತ AAPಯ ಶಾಸಕಾಂಗ ಸಭೆಯಲ್ಲಿ ಕೇಜ್ರಿವಾಲ್‌ ತಮ್ಮ ಶಾಸಕರಿಗೆ ಕರೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply