masthmagaa.com:
ಅನೂಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ಅಭಿನಯದಲ್ಲಿ ವಿಕ್ರಾಂತ ರೋಣ ಸಿನಿಮಾ ರಿಲೀಸ್ ಆಗಿತ್ತು. ಸುದೀಪ್ ಮತ್ತೆ ಅನೂಪ್ ಭಂಡಾರಿ ಅವರ ಕಾಂಬಿನೇಷನ್ಲ್ಲಿ ಬಿಲ್ಲ ರಂಗ ಭಾಷಾ ಸಿನಿಮಾ ಅನೌನ್ಸ್ ಆಗಿದೆ. ಸೋ ಸುದೀಪ್ ಬರ್ತ್ಡೇಗೆ ಸಿನಿಮಾದ ಅಪ್ಡೇಟ್ ಏನಾದ್ರು ಸಿಗಬಹುದು ಅಂತ ಅಭಿಮಾನಿಗಳು ಕಾಯ್ತಾ ಇದ್ರು. ಆದ್ರೆ ಅಭಿಮಾನಿಗಳ ಆಸೆ ಈಗ ನಿರಾಸೆ ಆಗಿದೆ. ಯಾಕಂದ್ರೆ ಬಿಲ್ಲ ರಂಗ ಭಾಷಾ ಸಿನಿಮಾದ ಅಪ್ಡೇಟ್ ಸುದೀಪ್ ಬರ್ತ್ಡೇ ದಿನ ಅಂದ್ರೆ ಇವತ್ತು ಸಿಗೋದಿಲ್ಲ ಅಂತ ಡೈರೆಕ್ಟರ್ ಅನೂಪ್ ಭಂಡಾರಿ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
‘ನೀವು ನಾನು ನೀಡುವ ಅಪ್ಡೇಟ್ಗಾಗಿ ಕಾದಿದ್ದೀರಿ ಎಂಬುದು ಗೊತ್ತು. ನಾನು ಕೂಡ ಸಿನಿಮಾ ಬಗ್ಗೆ ಅಪ್ಡೇಟ್ ನೀಡಲು ನಿಮ್ಮಷ್ಟೇ ಕಾತುರದಿಂದ ಕಾದಿದ್ದೇನೆ. ಆದರೆ, ಸುದೀಪ್ ನಟನೆಯ ಹಲವು ಸಿನಿಮಾಗಳು ಘೋಷಣೆ ಆಗುತ್ತಿರುವುದರಿಂದ ಸದ್ಯಕ್ಕೆ ಅಪ್ಡೇಟ್ ನೀಡದಿರಲು ನಮ್ಮ ತಂಡದವರು ನಿರ್ಧಾರ ತೆಗೆದುಕೊಂಡಿದ್ದಾರೆ. ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದ’ ಅಂತ ಅನೂಪ್ ಭಂಡಾರಿ ಪೋಸ್ಟ್ ಮಾಡಿದ್ದಾರೆ.
ಇನ್ನು ಕಿಚ್ಚ ಸುದೀಪ್ ಅವರ 46ನೇ ಚಿತ್ರಕ್ಕೆ “ಮ್ಯಾಕ್ಸ್” ಅನ್ನೋ ಟೈಟಲ್ ಅನೌನ್ಸ್ ಆಗಿದೆ. ಅಷ್ಟೇ ಅಲ್ಲ ಸುದೀಪ್ ಅವರು ಒಂದು ಸಿನಿಮಾ ನಿರ್ದೇಶನ ಮಾಡೋಕೆ ಮುಂದಾಗಿದ್ದಾರೆ. ‘ಕೆಆರ್ಜಿ ಸ್ಟುಡಿಯೋ’ ಮೂಲಕ ಈ ಚಿತ್ರ ಮೂಡಿಬರಲಿದೆ. ಇನ್ನು ಆರ್ ಚಂದ್ರು ಜೊತೆಗೂ ಸುದೀಪ್ ಸಿನಿಮಾ ಮಾಡ್ತಾ ಇದ್ದಾರೆ. ಅದು ಕೂಡ ಅನೌನ್ಸ್ ಆಗಿದೆ. ಇನ್ನು ಅನೂಪ್ ಭಂಡಾರಿ ಅವರ ಜೊತೆಗಿನ ಬಿಲ್ಲ ರಂಗ ಭಾಷಾ ಸಿನಿಮಾ ಯಾವಾಗ ಬರತ್ತೆ ಅಂತ ಕಾದು ನೋಡಬೇಕು.
-masthmagaa.com
Contact Us for Advertisement