ದತ್ತಪೀಠದಲ್ಲಿ ಬಿರಿಯಾನಿ ಊಟ ಸವಿದ ಕಿಡಿಗೇಡಿಗಳು! ಏನಿದು ಪ್ರಕರಣ?

masthmagaa.com:

ಚಿಕ್ಕಮಗಳೂರಿನ ಬಾಬಾ ಬುಡನ್​ಗಿರಿಯಲ್ಲಿರೋ ದತ್ತಪೀಠದಲ್ಲಿ ಹೋಮ- ಹವನ ಮಾಡೋ ತಾತ್ಕಾಲಿಕ ಶೆಡ್​​ನಲ್ಲಿ ಕೆಲವರು ಮಾಂಸದೂಟ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಪಟ್ಟಿದ್ದು ಎನ್ನಲಾದ ವೀಡಿಯೋ ಕೂಡ ವೈರಲ್‌ ಆಗ್ತಿದೆ. ಘಟನೆಗೆ ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಅಂದ್ಹಾಗೆ ಈ ವಿವಾದಿತ ಪ್ರದೇಶದ ವಿಚಾರ ಕೋರ್ಟ್​ನಲ್ಲಿದೆ. ದತ್ತಪೀಠದ 300 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಪ್ರಾಣಿ ಬಲಿ ನಡೆಯುವಂತಿಲ್ಲ ಅನ್ನೋದು ಸೇರಿದಂತೆ ಅನೇಕ ನಿಯಮಗಳಿವೆ. ಇವುಗಳನ್ನ ಗಾಳಿಗೆ ತೂರಿ ಮಾಂಸಹಾರ ಸೇವನೆ ಮಾಡಲಾಗಿದೆ ಎನ್ನಲಾಗ್ತಿದೆ. ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​, ಇನ್ಮುಂದೆ ದತ್ತಪೀಠದ ಒಳಗೆ ಮುಸ್ಲಿಮರನ್ನ ಬಿಡೋದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

-masthmagaa.com

Contact Us for Advertisement

Leave a Reply