masthmagaa.com:
ಚಿಕ್ಕಮಗಳೂರಿನ ಬಾಬಾ ಬುಡನ್ಗಿರಿಯಲ್ಲಿರೋ ದತ್ತಪೀಠದಲ್ಲಿ ಹೋಮ- ಹವನ ಮಾಡೋ ತಾತ್ಕಾಲಿಕ ಶೆಡ್ನಲ್ಲಿ ಕೆಲವರು ಮಾಂಸದೂಟ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಪಟ್ಟಿದ್ದು ಎನ್ನಲಾದ ವೀಡಿಯೋ ಕೂಡ ವೈರಲ್ ಆಗ್ತಿದೆ. ಘಟನೆಗೆ ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಅಂದ್ಹಾಗೆ ಈ ವಿವಾದಿತ ಪ್ರದೇಶದ ವಿಚಾರ ಕೋರ್ಟ್ನಲ್ಲಿದೆ. ದತ್ತಪೀಠದ 300 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಪ್ರಾಣಿ ಬಲಿ ನಡೆಯುವಂತಿಲ್ಲ ಅನ್ನೋದು ಸೇರಿದಂತೆ ಅನೇಕ ನಿಯಮಗಳಿವೆ. ಇವುಗಳನ್ನ ಗಾಳಿಗೆ ತೂರಿ ಮಾಂಸಹಾರ ಸೇವನೆ ಮಾಡಲಾಗಿದೆ ಎನ್ನಲಾಗ್ತಿದೆ. ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಇನ್ಮುಂದೆ ದತ್ತಪೀಠದ ಒಳಗೆ ಮುಸ್ಲಿಮರನ್ನ ಬಿಡೋದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
-masthmagaa.com
Contact Us for Advertisement