masthmagaa.com:
ಬಿಜೆಪಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ದೊಡ್ಡ ಆರೋಪ ಮಾಡಿದೆ. ಖರ್ಗೆ ದಲಿತರಾದ ಕಾರಣಕ್ಕೆ ಈ ಇಬ್ರೂ ನಾಯಕರು ಅವರಿಂದ ನೀರು ತಗೊಂಡಿಲ್ಲ ಅಂತ ಗಂಭೀರ ಆರೋಪ ಮಾಡಿದೆ. ಅಂದ್ಹಾಗೆ ಮೊನ್ನೆ ನಡೆದ ಪ್ರೆಸ್ಮೀಟ್ನಲ್ಲಿ ರಾಹುಲ್ ಹಾಗೂ ಸೋನಿಯಾಗಾಂಧಿ ನಡುವೆ ಕಾಂಗ್ರೆಸ್ ಪ್ರೆಸಿಡೆಂಟ್ ಮಲ್ಲಿಕಾರ್ಜುನ್ ಖರ್ಗೆ ಕೂತಿದ್ರು. ಈ ವೇಳೆ ಖರ್ಗೆ ತಾವು ನೀರು ಕುಡಿಯೋಕೆ ಮುಂಚೆ ಅಕ್ಕ ಪಕ್ಕ ಕೂತಿದ್ದ ತಾಯಿ ಮಗ ಇಬ್ಬರಿಗೂ ನೀರು ಕುಡೀತೀರ ಅಂತ ಆಫರ್ ಮಾಡಿದ್ರು. ಆದ್ರೆ ಇಬ್ಬರೂ ನೀರು ಬೇಡ ಅಂತೇಳಿದ್ರು. ಈ ವಿಡಿಯೋವನ್ನ ಬಿಜೆಪಿ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್ಗಳಲ್ಲಿ ಪೋಸ್ಟ್ ಮಾಡಿದೆ. ಇದ್ರಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ದಲಿತ ವ್ಯಕ್ತಿಯೊಬ್ಬರಿಂದ ನೀರು ತಗೊಳ್ಳೋಕೆ ನಿರಾಕರಿಸಿದ್ದಾರೆ. ಆದ್ರೆ ಖರ್ಗೆ ಅವರ ಮಗ ಖರ್ಗೆ ಜೂನಿಯರ್, ಅಂದ್ರೆ ಪ್ರಿಯಾಂಕ್ ಖರ್ಗೆ, ಇತರರನ್ನ ಹೀಯಾಳಿಸಿ ಜಾತಿ ನಿಂದನೆ ಮಾಡ್ತಾರೆ ಅಂತ ಆರೋಪಿಸಿದೆ. ದೆಹಲಿ ಸಿಎಂ ಅರವಿಂಜ್ ಕೇಜ್ರಿವಾಲ್ ಅರೆಸ್ಟ್ ಆದ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಒಂದು ಪೋಸ್ಟ್ ಹಾಕಿದ್ರು. ಇದ್ರಲ್ಲಿ ಪಿಎಂ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವ್ರನ್ನ ಚೋರ್ ಗುರು ಚಂಡಾಳ್ ಶಿಷ್ಯ ಅಂತೇಳಿದ್ರು. ಇದ್ರ ಬೆನ್ನಲ್ಲೇ ಬಿಜೆಪಿ ಈ ರೀತಿ ಕಾಂಗ್ರೆಸ್ ನಾಯಕತ ವಿರುದ್ಧ ಆರೋಪ ಮಾಡಿದೆ.
-masthmagaa.com
Contact Us for Advertisement