ದೆಹಲಿ ಮದ್ಯ ಹಗರಣ‌ದ ಅಪ್ರೂವರ್‌ನಿಂದ ಬಿಜೆಪಿಗೆ ದೇಣಿಗೆ!

masthmagaa.com:

ಚುನಾವಣಾ ಬಾಂಡ್‌ಗಳ ವಿಚಾರಗಳಲ್ಲಿ ಈಗ ಹೊಸ ಹೊಸ ಮಾಹಿತಿಗಳು ಬಯಲಾಗ್ತಿವೆ. ಇದೀಗ ದೆಹಲಿ ಮದ್ಯ ಹಗರಣ‌ ಪ್ರಕರಣದಲ್ಲಿ ಅಪ್ರೂವರ್‌ ಆಗಿರೋರ ಕಂಪನಿ ಬಿಜೆಪಿಗೆ ಬಾಂಡ್‌ ಮೂಲಕ ದೇಣಿಗೆ ನೀಡಿರೋದು ಗೊತ್ತಾಗಿದೆ. ED ಮತ್ತು CBIಗೆ ಅಪ್ರೂವರ್‌ ಆಗಿರೋ ಶರತ್‌ ಚಂದ್ರ ರೆಡ್ಡಿ ಅರಬಿಂದೋ ಫಾರ್ಮಾ ಕಂಪನಿಯಲ್ಲಿ ಡೈರೆಕ್ಟರ್‌ ಆಗಿದ್ದಾರೆ. 2022ರಲ್ಲಿ ಈ ಕಂಪನಿ ಖರೀದಿಸಿದ್ದ 52 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳ ಹೆಚ್ಚಿನ ಪಾಲು ಬಿಜೆಪಿ ಕೈಸೇರಿದೆ ಅಂತ ತಿಳಿದು ಬಂದಿದೆ. ಎಸ್‌… ರಿಲೀಸ್‌ ಆಗಿರೋ ಡೇಟಾ ಪ್ರಕಾರ… ಅರಬಿಂದೋ ಕಂಪನಿ ಖರೀದಿಸಿರೋ ಬಾಂಡ್‌ಗಳ ಪೈಕಿ ಸುಮಾರು 66% ಬಾಂಡ್‌ಗಳನ್ನ ಬಿಜೆಪಿ ಎನ್‌ಕ್ಯಾಶ್‌ ಮಾಡಿದೆ. 29% ಬಾಂಡ್‌ಗಳು BRSಗೆ ಹೋಗಿದೆ. ಅದ್ರಲ್ಲೂ ಇಂಟರೆಸ್ಟಿಂಗ್‌ ಅಂದ್ರೆ ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಶರತ್‌ ಚಂದ್ರ ರೆಡ್ಡಿಯವ್ರನ್ನ 2022ರ ನವೆಂಬರ್‌ 10ಕ್ಕೆ ಅರೆಸ್ಟ್‌ ಮಾಡಲಾಗಿತ್ತು. ಈತ ಅರೆಸ್ಟ್‌ ಆದ 5 ದಿನಗಳ ನಂತ್ರ ಅಂದ್ರೆ ನವೆಂಬರ್‌ 15ಕ್ಕೆ ಅರಬಿಂದೋ ಕಂಪನಿ 5 ಕೋಟಿ ಮೌಲ್ಯದ ಬಾಂಡ್‌ ಖರೀದಿ ಮಾಡಿದೆ. ಆಮೇಲೆ ಅದೇ ನವೆಂಬರ್‌ 21ಕ್ಕೆ ಬಿಜೆಪಿ ಈ ಬಾಂಡ್‌ ಎನ್‌ಕ್ಯಾಶ್‌ ಮಾಡಿದೆ.

-masthmagaa.com

Contact Us for Advertisement

Leave a Reply