masthmagaa.com:
ಯುಪಿಯಲ್ಲಿ ಬ್ಯಾನ್ ಆಗಿ ದೇಶದಲ್ಲಿ ಸುದ್ದಿಯಾಗಿದ್ದ “ಹಲಾಲ್” ವಿಚಾರ ಈಗ ಮತ್ತೆ ಮುನ್ನಲೆಗೆ ಬಂದಿದೆ. ಹಿಂದೂಗಳು ಹಲಾಲ್ ಉತ್ಪನ್ನಗಳನ್ನ ತಿನ್ನೋದನ್ನ ನಿಲ್ಲಿಸಬೇಕು ಅಂತ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿಕೆ ನೀಡಿದ್ದಾರೆ. ಹಿಂದೂಗಳು ಕೇವಲ ಜಟ್ಕಾ ಮಾಂಸ (ಅಂದ್ರೆ ಪ್ರಾಣಿಯನ್ನ ಒಂದೇ ಹೊಡೆತದಲ್ಲಿ ಹತ್ಯೆ ಮಾಡೋದು) ಅದನ್ನ ಮಾತ್ರ ತಿನ್ಬೇಕು. ಇನ್ಮುಂದೆ ಹಲಾಲ್ ಮಾಂಸ ತಿಂದು ನಮ್ಮ ಧರ್ಮವನ್ನ ಭ್ರಷ್ಟಗೊಳಿಸೋದಿಲ್ಲಾ ಅಂತ ಪ್ರತಿಜ್ಞೆ ಮಾಡಿ ಅಂತ ಹಿಂದೂಗಳಿಗೆ ಗಿರಿರಾಜ್ ಸಿಂಗ್ ಹೇಳಿದ್ದಾರೆ. ʻಹಲಾಲ್ ಮಾಂಸವನ್ನು ಮಾತ್ರ ತಿನ್ನುತ್ತೇವೆ ಅಂತ ನಿರ್ಧರಿಸಿದ ಎಲ್ಲ ಮುಸ್ಲಿಮರನ್ನು ನಾನು ಪ್ರಶಂಸಿಸುತ್ತೇನೆ. ಅದೇ ರೀತಿ ಹಿಂದೂಗಳು ತಮ್ಮ ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಬದ್ಧತೆ ತೋರಿಸಬೇಕು. ಮುಸ್ಲಿಂ ಸಮುದಾಯದಲ್ಲಿ ಜಟ್ಕಾ ಮಾಂಸ ತಿನ್ನುವುದನ್ನು ನಿಷೇಧಿಸಲಾಗಿದೆ. ಈ ಕಾರಣಕ್ಕಾಗಿ ಅವರು ಹಲಾಲ್ ಮಾಂಸವನ್ನು ಮಾತ್ರ ಸೇವಿಸುತ್ತಾರೆʼ ಅಂತ ಸಿಂಗ್ ಹೇಳಿದ್ದಾರೆ.
-masthmagaa.com
Contact Us for Advertisement