masthmagaa.com:
ಕಲಬುರ್ಗಿ ಜಿಲ್ಲೆಯ ಚಿತ್ತಾಪುರದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ರಸ್ತೆ ಅಪಘಾತವನ್ನ ಹಲ್ಲೆ ಅಂತ ಬಿಂಬಿಸಿ, ಕತೆಕಟ್ಟಿದ್ರು. ಪೊಲೀಸರು ತನಿಖೆ ಮಾಡಿದಾಗ ಈ ಸಿನಿಮೀಯ ಪ್ಲಾನ್ ಬಟಾಬಯಲಾಗಿದೆ. ನವೆಂಬರ್ 18ರಂದು ನಡೆದಿದ್ದ ರಸ್ತೆ ಅಪಘಾತವನ್ನು ರಾಜಕೀಯವಾಗಿ ಬಳಸಿಕೊಂಡಿದ್ದ ಈತ ಸಚಿವ ಪ್ರಿಯಾಂಕ್ ಖರ್ಗೆ ನನ್ನ ಮೇಲೆ ಅಟ್ಯಾಕ್ ಮಾಡಿಸಿದ್ದಾರೆ ಅಂತ ಕತೆಕಟ್ಟಿದ್ದ. ಆದ್ರೆ ಈತನ ಕಾಲ್ ರೆಕಾರ್ಡ್ಗಳು, ಅಪಘಾತ ನಡೆದ ಸ್ಥಳದ ಟೆಕ್ನಿಕಲ್ ಎವಿಡೆನ್ಸ್ಗಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿಂದ ಈತನ ಪ್ಲಾನ್ ಬಯಲಾಗಿದೆ. ಪೊಲೀಸರು ಈತನ ಕತೆ, ಚಿತ್ರಕತೆ, ನಿರ್ದೇಶನದ ರೂಪುರೇಶೆಗಳನ್ನ ಬಯಲು ಮಾಡಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗ್ತಿದೆ ಅಂದಿದ್ದಾರೆ.
-masthmagaa.com
Contact Us for Advertisement