masthmagaa.com:
ರಾಜಸ್ಥಾನದ ಬಿಜೆಪಿ ನಾಯಕ ಸಂದೀಪ್ ದಯಾಮ ವಿವಾದಾತ್ಮಕ ಹೇಳಿಕೆ ನೀಡಿ, ಈಗ ಕ್ಷಮೆ ಕೇಳಿದ್ದಾರೆ. ನವೆಂಬರ್ ಒಂದರಂದು ಇಲ್ಲಿನ ಅಲ್ವಾರ್ನಲ್ಲಿ ನಡೆದ ರ್ಯಾಲಿ ವೇಳೆ “ಈ ಭಾಗದ ಗುರುದ್ವಾರಗಳು ಕೊಳೆತ ಹಣ್ಣಿನಂತಾಗಿವೆ, ಅವನ್ನ ಬೇರು ಸಮೇತ ಕಿತ್ತಾಕ್ಬೇಕು. ಇಲ್ಲಿನ MP ಬಾಬಾ ಬಾಲಕ್ನಾಥ್ ಅದನ್ನ ಮಾಡ್ತಾರೆ” ಅಂತೇಳಿ ಸಿಖ್ ಸಮುದಾಯದ ಟೀಕೆಗೆ ಗುರಿಯಾಗಿದ್ದಾರೆ. UP ಸಿಎಂ ಯೋಗಿ ಆದಿತ್ಯನಾಥ್ ಸಮ್ಮುಖದಲ್ಲೆ ಇಂತ ಹೇಳಿಕೆ ನೀಡಿ, ಅಲ್ಲಿ ಅಲ್ಪಸಂಖ್ಯಾತರಾಗಿರೊ ಸಿಖ್ ಜನ್ರ ವ್ಯಾಪಕ ಟೀಕೆ ನಂತ್ರ ಕ್ಷಮೆ ಕೇಳಿದ್ದಾರೆ. ಅಂದ್ಹಾಗೆ ರಾಜಸ್ಥಾನದ ಅಲ್ವಾರ್ನಲ್ಲಿ ರಾಜಸ್ಥಾನದ ಯೋಗಿ ಅಂತಾನೆ ಕರೆಸಿಕೊಳ್ಳೊ ಬಾಬಾ ಬಾಲಕ್ನಾಥ್ರನ್ನ ಕಾಂಗ್ರೆಸ್ನ ಮುಸ್ಲಿಂ ಕ್ಯಾಂಡಿಡೇಟ್ ವಿರುದ್ಧ ಕಣಕ್ಕಿಳಿಸಿ ಬಿಜೆಪಿ ಹಿಂದುತ್ವ ಕಾರ್ಡ್ ಪ್ಲೇ ಮಾಡಿದೆ. ಆದ್ರೆ ಸಂದೀಪ್ ದಯಾಮ ಸಿಖ್ಖರ ವಿರುದ್ಧ ಹೇಳಿಕೆ ನೀಡಿ ಬಿಜೆಪಿ ವರ್ಚಸ್ಸಿಗೆ ಡ್ಯಾಮೇಜ್ ಮಾಡಿದ್ದಾರೆ ಎನ್ನಲಾಗ್ತಿದೆ.
-masthmagaa.com
Contact Us for Advertisement