masthmagaa.com:
ಇತ್ತೀಚೆಗಷ್ಟೇ ದೆಹಲಿಗೆ ಹೋಗಿ ಬಿಜೆಪಿ ಹೈಕಮಾಂಡ್ನ್ನ ಭೇಟಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇದೀಗ ರಾಜ್ಯ ಬಿಜೆಪಿ ನಾಯಕರ ಜೊತೆ ಸಭೆ ನಡೆಸಿದ್ದಾರೆ. ಜನವರಿ 21 ರಂದು ಬೆಂಗಳೂರು ಡಾಲರ್ಸ್ ಕಾಲೋನಿಯ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವ್ರ ನಿವಾಸದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಒಟ್ಟು ಸೇರಿದ್ದಾರೆ. ಮೊದಲ ಮೈತ್ರಿ ಸಭೆಯಲ್ಲಿ ಎದುರು ಬದುರಾಗಿದ್ದಾರೆ. ಈ ವೇಳೆ ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನ ಜೆಡಿಎಸ್ಗೆ ಬಿಟ್ಕೊಡೋ ಬಗ್ಗೆ ಡಿಸೈಡ್ ಮಾಡಲಾಯ್ತು. ಈ ವಿಷಯವನ್ನ ಹೈಕಮಾಂಡ್ಗೆ ತಿಳಿಸಿ, ಅಫೀಶಿಯಲಾಗಿ ಅನೌನ್ಸ್ ಮಾಡಲಾಗುತ್ತೆ ಅಂತ ಹೇಳಲಾಗ್ತಿದೆ. ಅಂದ್ಹಾಗೆ ಕಳೆದ ಬಾರಿ ಬಿಜೆಪಿ ಇದೇ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಆದ್ರೆ ಈ ಕ್ಷೇತ್ರದಲ್ಲಿ ಸದ್ಯ ಉಪಚುನಾವಣೆ ನಡೀತಿರೋ ಕಾರಣದಿಂದ ಕ್ಷೇತ್ರವನ್ನ ಜೆಡಿಎಸ್ಗೆ ಬಿಟ್ಕೋಡೋಕೆ ಬಿಜೆಪಿ ನಿರ್ಧರಿಸಿದೆ.
-masthmagaa.com
Contact Us for Advertisement