ನಕಲಿ ಮೈಸೂರು ಸ್ಯಾಂಡಲ್‌ ಸೋಪ್‌ ಪ್ರಕರಣ: ಇಬ್ಬರು ಅರೆಸ್ಟ್

masthmagaa.com

ಹೈದ್ರಾಬಾದ್‌ನಲ್ಲಿ ನಕಲಿ ಮೈಸೂರು ಸ್ಯಾಂಡಲ್‌ ಸೋಪ್‌ ತಯಾರಿಕೆ ಜಾಲದ ಕೇಸ್‌ಗೆ ಸಂಬಂಧಿಸಿದಂತೆ ಇದೀಗ ಇಬ್ಬರನ್ನ ಅರೆಸ್ಟ್‌ ಮಾಡಲಾಗಿದೆ. ರಾಕೇಶ್‌ ಜೈನ್‌ ಹಾಗೂ ಮಹಾವೀರ್‌ ಜೈನ್‌ ಅನ್ನೋ ಈ ಇಬ್ಬರು ವ್ಯಕ್ತಿಗಳು, ಬಿಜೆಪಿಯ ಸಕ್ರಿಯ ನಾಯಕರು ಹಾಗೂ ಕಾರ್ಯಕರ್ತರಾಗಿದ್ದಾರೆ ಅಂತ ITBT ಸಚಿವ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ. ಇತ್ತ ಗದಗ ಜಿಲ್ಲೆಯಲ್ಲಿ ಬ್ಯಾನರ್‌ ಕಟ್ಟುವಾಗ ವಿದ್ಯುತ್‌ ಸ್ಪರ್ಷಿಸಿ ಮೃತಪಟ್ಟಿದ್ದ ಯುವಕರ ಕುಟುಂಬಗಳಿಗೆ ನಟ ಯಶ್‌ ನೆರವು ನೀಡಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿಗಳ ಚೆಕ್‌ ತಲುಪಿಸಿದ್ದಾರೆ. ಇನ್ನು ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಟೈಮ್‌ ಟೇಬಲ್‌ಗಳು ಪ್ರಕಟವಾಗಿವೆ. ಮಾರ್ಚ್‌ 1 ರಿಂದ 22ರವರೆಗೆ ದ್ವಿತೀಯ ಪಿಯುಸಿ ಪರೀಕ್ಚೆಗಳು ನಡೆಯಲಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್‌ 25ರಿಂದ ಏಪ್ರಿಲ್‌ 6ವರೆಗೆ ನಡೆಯಲಿವೆ.

-masthmagaa.com

Contact Us for Advertisement

Leave a Reply