ಬಿಎಲ್​ ಸಂತೋಷ್ ಸಾಲು ಸಾಲು ಆರೋಪ ಮಾಡಿದ ಜಗದೀಶ್‌ ಶೆಟ್ಟರ್‌!

masthmagaa.com:

BJP ತೊರೆದು ಕೈ ಪಾಳಯ ಸೇರಿರುವ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, ತಮಗೆ ಟಿಕೆಟ್‌ ಕೈತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್​ ಕಾರಣ ಅಂತ ಬಹಿರಂಗವಾಗಿಯೇ ಗಂಭೀರ ಆರೋಪ ಮಾಡಿದ್ದಾರೆ. ಹೈಕಮಾಂಡ್‌ ಬಳಿ ನನ್ನ ವಿರುದ್ಧ ಸಂತೋಷ್‌ ಅಪಪ್ರಚಾರ ಮಾಡಿದ್ದಾರೆ. ಅವರ ಟೀಂ ಕೂಡ ನನ್ನ ವಿರುದ್ಧ ತಂತ್ರಗಾರಿಕೆ ಮಾಡಿದ್ದರಿಂದಲೇ ನನಗೆ ಟಿಕೆಟ್‌ ಕೈತಪ್ಪಿದೆ ಎಂದಿದ್ದಾರೆ. ಅಲ್ದೇ ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಎಸ್‌ ಎ ರಾಮದಾಸ್‌ ಬದಲು ಸಂತೋಷ್‌ ಅವರ ಆಪ್ತರಾದ ಶ್ರೀವತ್ಸ್‌ ಅನ್ನೊರಿಗೆ ಟಿಕೆಟ್‌ ನೀಡಲಾಗಿದೆ ಅಂತ ಹೇಳಿದ್ದಾರೆ. ಜೊತೆಗೆ ಕೋರ್​ ಕಮಿಟಿಯಲ್ಲಿ ನಳಿನ್ ಕುಮಾರ್ ಕಟೀಲು ಹೆಸರು ಸೇರಿಸಿದ್ದೇ ಸಂತೋಷ್​. ಕೆಲವರ ಕಪಿ ಮುಷ್ಟಿಯಲ್ಲಿ ಬಿಜೆಪಿ ಇದೆ. ಹೀಗಾಗಿ ಅನಾಹುತ ಆಗುತ್ತಿದೆ ಅಂತ ಅಸಮಾಧಾನ ಹೊರಹಾಕಿದ್ದಾರೆ. ಇತ್ತ ಶೆಟ್ಟರ್‌ ಆರೋಪಗಳಿಗೆ ಪ್ರತಿಕ್ರಿಯಿಸಿರೊ ನಳೀನ್‌ ಕುಮಾರ್‌ ಕಟೀಲ್‌, ಯಾರೋ ಒಬ್ಬರ ನಿರ್ಣಯದಂತೆ ನಮ್ಮಲ್ಲಿ ಅಭ್ಯರ್ಥಿ ಆಯ್ಕೆ ಮಾಡಲ್ಲ. ಒಮ್ಮತದ ಅಭಿಪ್ರಾಯದ ಮೇಲೆ ಚುನಾವಣಾ ಪ್ರಕ್ರಿಯೆ ನಡೆಯುತ್ತೆ. ಶೆಟ್ಟರ್ ಅವ್ರು ಪಾರ್ಟಿ ಅಧ್ಯಕ್ಷ ಆಗಿದ್ದವರು, ಸಾಮೂಹಿಕ ನಾಯಕತ್ವ ಗೊತ್ತಿದೆ. ಪಕ್ಷದಿಂದ ಹೊರಗೆ ಹೋಗಿ ಹೀಗೆಲ್ಲ ಮಾತನಾಡುವುದು ಅವರಿಗೆ ಶೋಭೆ ತರಲ್ಲ ಎಂದಿದ್ದಾರೆ.

-masthmagaa.com

Contact Us for Advertisement

Leave a Reply