ನಾಯಕತ್ವ ಬದಲಾವಣೆಯೇ ಬಿಜೆಪಿ ಶಕ್ತಿ: ಬಿ.ಎಲ್ ಸಂತೋಷ್

masthmagaa.com:

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್ ಇವತ್ತು ಕೆಲವೊಂದು ಬದಲಾವಣೆಯ ಮಾತುಗಳನ್ನಾಡಿದ್ದಾರೆ. ಮೈಸೂರಲ್ಲಿ ಮಾತಾಡಿದ ಅವರು, ನಾಯಕತ್ವ ಬದಲಾವಣೆಯೇ ಬಿಜೆಪಿಗಿರುವ ಶಕ್ತಿ.. ಗುಜರಾತ್ ಮತ್ತು ಪಂಜಾಬ್​ನಲ್ಲಿ ಹಾಲಿ ಶಾಸಕರು ಮತ್ತು ಕುಟುಂಬಸ್ಥರನ್ನು ಹೊರಗಿಟ್ಟು ಯಶಸ್ಸು ಕಂಡಿದ್ದೀವಿ.. ಒಂದು ಶರ್ಟ್​ 4 ವರ್ಷ ಆದ್ಮೇಲೆ ಬದಲಿಸ್ತಿದ್ದೀವಿ ಅಂದ್ರೆ ಅದು ಹರಿದೋಗಬೇಕು, ಹಾಳಾಗಬೇಕು ಅಂತಿಲ್ಲ.. ಅದು ಹಳೇದಾಗಿದೆ ಅಂತ ಬದಲಿಸ್ತೀವಿ.. ಬದಲಾವಣೆ ಜಗದ ನಿಯಮ ಅಂತ ಹೇಳಿದ್ದಾರೆ. ಆದ್ರೆ ಯಾರನ್ನ ಬದಲಿಸ್ತಾರೆ ಏನ್ ಕಥೆ ಅನ್ನೋದನ್ನ ಸ್ಪಷ್ಟವಾಗಿ ಹೇಳಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಬಿಎಲ್ ಸಂತೋಷ್ ಹೇಳಿದ್ದು ಸರಿಯಾಗಿದೆ ಅಂತ ಹೇಳಿದ್ದಾರೆ. ಆದ್ರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಕುಟುಂಬ ರಾಜಕಾರಣ ಇಲ್ಲ ಅಂತಾದ್ರೆ ಯಡಿಯೂರಪ್ಪ ಮತ್ತು ಅವರ ಮಕ್ಕಳದ್ದು ಏನು ಅಂತ ಪ್ರಶ್ನಿಸಿದ್ದಾರೆ.

-masthmagaa.com

Contact Us for Advertisement

Leave a Reply