masthmagaa.com:
ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಕಲಬುರಗಿ ಹೋಗಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವ್ರಿಗೆ ಕಪ್ಪು ಬಟ್ಟೆಯನ್ನ ತೋರಿಸಲಾಗಿದೆ. ಇಲ್ಲಿನ SVP ವೃತ್ತದಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಹಾರ ಹಾಕೋ ವೇಳೆ ಈ ಘಟನೆ ನಡೆದಿದೆ. ತಮ್ಮ ಸಮುದಾಯಗಳನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಿಲ್ಲ ಅನ್ನೊ ಕಾರಣಕ್ಕೆ ಕೆಲ ಸಮುದಾಯದ ಮುಖಂಡರು ಕಪ್ಪು ಬಟ್ಟೆ ತೋರಿಸಿದ್ದಾರೆ. ಹಾಗೂ ಮಾತು ತಪ್ಪಿದ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಅಂತ ಘೋಷಣೆಗಳನ್ನ ಕೂಡ ಕೂಗಿದ್ದಾರೆ. ತಕ್ಷಣವೇ ಇವರನ್ನ ಪೊಲೀಸರು ವಶಕ್ಕೆ ಪಡೆದು, ಅಲ್ಲಿಂದ ಕರೆದೊಯ್ದಿದ್ದಾರೆ.
-masthmagaa.com
Contact Us for Advertisement