masthmagaa.com:
ಬ್ರಾಹ್ಮಣರು ಭಾರತದವರಲ್ಲ, ರಷ್ಯಾದಿಂದ ಬಂದವರು ಅಂತ ಆರ್ಜೆಡಿ ನಾಯಕ ಯದುವಂಶ ಕುಮಾರ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಒಬ್ಬ ಬ್ರಾಹ್ಮಣನೂ ಭಾರತಕ್ಕೆ ಸೇರಿಲ್ಲ, ಅವರೆಲ್ಲ ರಷ್ಯಾ ಹಾಗೂ ಇತರೆ ದೇಶಗಳಿಂದ ಬಂದವರು. ಅವರನ್ನು ಅಲ್ಲಿಂದ ಗಡಿ ಪಾರು ಮಾಡಲಾಗಿತ್ತು. ನಂತರ ಅವರೆಲ್ಲ ಭಾರತಕ್ಕೆ ಬಂದಿದ್ದಾರೆ ಅಂತ ಹೇಳಿದ್ದಾರೆ. ಇನ್ನು ನಮ್ಮ ಒಗ್ಗಟ್ಟನ್ನೆಲ್ಲಾ ಒಡೆದು ನಾವು ಹೊಡೆದಾಡುವಂತೆ ಮಾಡ್ತಿದಾರೆ. ನಮ್ಮ ನಡುವೆ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಇಲ್ಲಿಂದ ಓಡಿಸಬೇಕು ಅಂತ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಬ್ರಾಹ್ಮಣರು ನಮ್ಮ ದೇಶದ ನಿವಾಸಿಗಳು. ಬ್ರಾಹ್ಮಣರು ನಮಗೆ ಮೌಲ್ಯಗಳನ್ನು ಕಲಿಸುತ್ತಿದ್ದಾರೆ. ಆದರೆ ಆರ್ಜೆಡಿ ನಾಯಕರು ಅವರನ್ನು ಓಡಿಸುವ ಕುರಿತು ಮಾತನಾಡುತ್ತಿದ್ದಾರೆ. ಸಮಾಜದಲ್ಲಿ ದ್ವೇಷ ಹರಡುವ ಇಂಥವರನ್ನು ಮೊದಲು ಹೊರಹಾಕುವ ಅಗತ್ಯವಿದೆ ಅಂತ ಬಿಜೆಪಿ ತಿರುಗೇಟು ನೀಡಿದೆ.
-masthmagaa.com
Contact Us for Advertisement