ಚಾಕುವಿನಿಂದ ಇರಿದು ಯುವನಟ ಸತೀಶ್ ವಜ್ರ ಬರ್ಬರ ಹತ್ಯೆ!

masthmagaa.com:
ಕನ್ನಡ ಚಿತ್ರರಂಗದ ಯುವ ನಟ ಸತೀಶ್ ವಜ್ರ ಅವರನ್ನ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವರದಿಯಾಗಿದ್ದು RR ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.
ನಿನ್ನೆ ರಾತ್ರಿ ಸತೀಶ್​ ಕೊಲೆಯಾಗಿದ್ದು, ಬೆಳ್ಳಗ್ಗೆ ಮನೆ ಮಾಲೀಕ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.  ಮೂಲತಃ ಪಾಂಡವಪುರದ ಹಳೇಬಿಡಿ ಗ್ರಾಮದವರಾದ ಸತೀಶ್, ‘ಲಗೋರಿ’, ‘ಕ್ರಶ್’ ಸೇರಿದಂತೆ‌ ಹಲವು ಚಿತ್ರಗಳಲ್ಲಿ ಸಹನಟರಾಗಿ ನಟಿಸಿದ್ದರು. ಟಿಕ್ ಟಾಕ್ ಮತ್ತು ರೀಲ್ಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತಕ್ಕ ಮಟ್ಟಿಗೆ ಫಾಲೋವರ್ ಗಳನ್ನ ಹೊಂದಿದ್ದರು. ಸಿನಿಮಾ ನಟನೆ ಜತೆಗೆ ಆರ್​ಆರ್ ನಗರದಲ್ಲಿ ‘ವಜ್ರ’ ಹೆಸರಿನಲ್ಲಿ ಸಲೂನ್ ನಡೆಸುತ್ತಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಸತೀಶ್‌ ವಜ್ರ ಅವರಿಗೆ 31 ವರ್ಷ ವಯಸ್ಸಾಗಿತ್ತು.
ಇನ್ನು ಒಂದು ವರ್ಷದ ಹಿಂದಷ್ಟೇ ಓರ್ವ ಯುವತಿಯನ್ನು ಪ್ರೀತಿಸಿ ಸತೀಶ್ ವಜ್ರ ಮದುವೆಯಾಗಿದ್ದರು, ಆದರೆ ಮೂರು ತಿಂಗಳ ಹಿಂದಷ್ಟೇ ಸತೀಶ್ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಅಕ್ಕನಿಗೆ ಸಾವಿಗೆ ಸತೀಶ್‌ ಕಾರಣ ಎಂದು ಶಂಕಿಸಿ ಬಾಮೈದನಿಂದಲೇ ಸತೀಶ್ ಕೊಲೆ ಆಗಿದ್ದಾರೆ ಎನ್ನುವ  ಶಂಕೆ ಇದೀಗ ವ್ಯಕ್ತವಾಗಿದೆ. ಅಕ್ಕನ ಸಾವಿಗೆ ಕಾರಣನಾದ ಭಾವನನ್ನ ಮೈದುನನೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವಿಚಾರಣೆ ಮುಂದುವರೆದಿದೆ.
-masthmagaa.com
Contact Us for Advertisement

Leave a Reply