masthmagaa.com:
ಕೆನಡಾದಿಂದ ಹೋಗೋ-ಬರೋ ಏರ್ ಇಂಡಿಯಾ ವಿಮಾನಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಅಂತ ಕೆನಡಾ ಸಾರಿಗೆ ಸಚಿವ ಪ್ಯಾಬ್ಲೋ ರೋಡ್ರಿಗಸ್ ಹೇಳಿದ್ದಾರೆ. ಖಲಿಸ್ತಾನಿ ಉಗ್ರ ಗುರುಪಥ್ವಂತ್ ಪನ್ನುನ್ ವೀಡಿಯೋ ಬೆದರಿಕೆ ಹಿನ್ನೆಲೆಯಲ್ಲಿ ಉಭಯ ದೇಶಗಳು ಈ ಬಗ್ಗೆ ಎಚ್ಚರ ವಹಿಸಿವೆ. ಈಗಾಗ್ಲೆ ದೆಹಲಿ, ಅಮೃತ್ಸರ ವಿಮಾನ ನಿಲ್ದಾಣದಲ್ಲಿ ಭಾರತ ಭದ್ರತೆ ಹೆಚ್ಚಿಸಿದೆ. ಜೊತೆಗೆ ಕೆನಡಾ ಸರ್ಕಾರಕ್ಕೂ ಈ ಬಗ್ಗೆ ಕ್ರಮ ತೆಗೊಳ್ಳುವಂತೆ ಭಾರತ ಹೇಳಿತ್ತು. ಇದೀಗ ಕೆನಡಾ ಈ ವಿಷಯದಲ್ಲಿ ಬಹಳ ಸೀರಿಯಸ್ ಆದ ಕ್ರಮ ತಗೊಂಡಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಕೆನಡಾದ Royal Canadian Mounted Police (RCMP) ಬೆದರಿಕೆ ಬಗ್ಗೆ ತನಿಖೆ ಮಾಡ್ತಿದೆ ಅಂತ ತಿಳಿದು ಬಂದಿದೆ.
-masthmagaa.com
Contact Us for Advertisement