ನನ್ನ ಮೇಲೆ ಷಡ್ಯಂತ್ರ ರೂಪಿಸಲಾಗಿದೆ, ದೊಡ್ಡೋರ ಕೈವಾಡ ಇದೆ: DKS

masthmagaa.com:

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ಗೆ CBI ಹೊಸದಾಗಿ ನೀಡಿರೋ ನೋಟಿಸ್‌ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ʻರಾಜ್ಯ ಸರ್ಕಾರ CBI ತನಿಖೆಗೆ ನೀಡಿದ್ದ ಆದೇಶ ವಾಪಸ್‌ ತಗೊಂಡ್ಮೇಲೂ ನನಗೆ ನೋಟಿಸ್‌ ನೀಡಲಾಗಿದೆ. ಇದು ನನ್ನ ಮೇಲೆ ದೌರ್ಜನ್ಯ ನಡೆಸಿ ರಾಜಕೀಯವಾಗಿ ನನ್ನ ಮುಗಿಸ್ಬೇಕು ಅಂತ ಮಾಡಿರೋ ಷಡ್ಯಂತ್ರ. ನಾನು ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ಹೆದರಲ್ಲ. ಅವರು ನನ್ನನ್ನ ಜೈಲಿಗೆ ಹಾಕ್ಬೇಕು ಅಂದುಕೊಂಡಿದ್ರೆ ಹಾಕ್ಲಿ. ಸರ್ಕಾರ ಈಗಾಗ್ಲೇ ಈ ಕೇಸನ್ನ ಲೋಕಾಯುಕ್ತಕ್ಕೆ ಕೊಟ್ಟಿದೆ. ತನಿಖೆ ವಿಚಾರವನ್ನ ಲೋಕಾಯುಕ್ತ ನೋಡ್ಕೊಳುತ್ತೆʼ ಅಂತ ಹೇಳಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply