masthmagaa.com:
ಚಂದನವನದ ಅಭಿನವ ಭಾರ್ಗವ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನ ಇಂದು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿಯವರು ವಿಷ್ಣುವರಿಗೆ ಕರ್ನಾಟಕ ರತ್ನಕೊಡುವ ಬಗ್ಗೆ ನಾವು ಚಿಂತನೆ ನಡೆಸ್ತಿದೆ ಅಂತ ಹೇಳಿದ್ದಾರೆ. ಮೈಸೂರು ತಾಲೂಕು ಹೆಚ್ಡಿ ಕೋಟೆ ರಸ್ತೆಯ ಹಾಲಾಳು ಗ್ರಾಮದ ಬಳಿ 3 ಎಕರೆ ಜಾಗದಲ್ಲಿ 11 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಿಸಲಾಗಿದೆ. ವಿಷ್ಣು ಪುತ್ಥಳಿ, ಅಡಿಟೋರಿಯಂ, ಕ್ಲಾಸ್ ರೂಮ್, ಕ್ಯಾಂಟೀನ್ ಇತ್ಯಾದಿ ವಿಶೇಷತೆಗಳು ಕಟ್ಟಡದಲ್ಲಿವೆ. ವಿಷ್ಣು ಅವರ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ಆಗಬೇಕು ಅಂತ ಮೊದಲಿಂದಲೂ ಅಭಿಮಾನಿಗಳು ಪಟ್ಟು ಹಿಡಿತಾ ಇದ್ದಾರೆ. ಆದ್ರೆ ಅದು ಸಾಧ್ಯವಾಗದೇ ಈಗ ವಿಷ್ಣು ಅವರ ತವರಿನಲ್ಲೇ ಸ್ಮಾರಕ ನಿರ್ಮಿಸಲಾಗಿದೆ.
-masthmagaa.com
Contact Us for Advertisement