masthmagaa.com:
ಮುಖ್ಯಮಂತ್ರಿ ಸಿದ್ಧರಾಮಯ್ಯ ಐಸಿಸ್ ಉಗ್ರರ ನಂಟಿರೋ ವ್ಯಕ್ತಿ ಜೊತೆಗೆ ವೇದಿಕೆ ಹಂಚಿಕೊಂಡಿದ್ದಾರೆ ಅಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಸೋಮವಾರ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಮುಸ್ಲಿಂ ಧರ್ಮಗುರುಗಳ ಸಮಾವೇಶವೊಂದ್ರಲ್ಲಿ ಪಾಲ್ಗೊಂಡಿದ್ರು. ಇದೇ ವೇದಿಕೆಯಲ್ಲಿ ತನ್ವೀರ್ ಪೀರ್ ಅನ್ನೋ ಧರ್ಮಗುರು ಕೂಡ ಇದ್ರು. ಈಗ ಈ ಬಗ್ಗೆ ಯತ್ನಾಳ್ ಕಿಡಿಕಾರಿದ್ದಾರೆ. ʻಈ ತನ್ವೀರ್ ಪೀರ್ ಅನ್ನೋರು ಮಿಡ್ಲ್ ಈಸ್ಟ್ ದೇಶಗಳಿಂದ ಹಣ ಪಡೆದು ಭಾರತದ ಗೌಪ್ಯ ಮಾಹಿತಿಗಳನ್ನ ಅವರೊಂದಿಗೆ ಶೇರ್ ಮಾಡ್ತಾರೆ. ಈ ಮೌಲ್ವಿ ಸೌದಿ, ಯೆಮನ್ಗಳಿಗೆ ಭೇಟಿ ನೀಡಿದ್ದ ವೇಳೆ ಭಯೋತ್ಪಾದಕ ಸಂಘಟನೆಗಳ ಲೀಡರ್ಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. NIA ಈ ವ್ಯಕ್ತಿಯ ಬಗ್ಗೆ ತನಿಖೆ ನಡೆಸ್ಬೇಕು” ಅಂತ ಯತ್ನಾಳ್ ಆರೋಪಿಸಿದ್ದಾರೆ. ಇನ್ನು ಈ ಬಗ್ಗೆ ಮುಸ್ಲಿಂ ಧರ್ಮಗುರು ಸಯ್ಯದ್ ತಾಜುದ್ದೀನ್ ಖಾದ್ರಿ ಸ್ಪಷ್ಟನೆ ನೀಡಿದ್ದು, “ಸಿಎಂ ಪಾಲ್ಗೊಂಡಿದ್ದ ವೇದಿಕೆ ಮೇಲೆ ಉಗ್ರರ ನಂಟಿದ್ದೋರು ಯಾರೂ ಇರಲಿಲ್ಲ. ಸಮ್ಮೇಳನದಲ್ಲಿ ಭಾಗವಹಿಸಿದ್ದ ಎಲ್ಲಾ ಧರ್ಮಗುರುಗಳ ಮಾಹಿತಿಯನ್ನ ಈ ಮೊದಲೇ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ನೀಡಲಾಗಿತ್ತು” ಅಂದಿದ್ದಾರೆ.
-masthmagaa.com
Contact Us for Advertisement