masthmagaa.com:
ಹೈದ್ರಾಬಾದ್ನಲ್ಲಿ ಚೈನೀಸ್ ಮಾಂಜ ಅಥ್ವಾ ಗಾಳಿಪಟದ ದಾರ ಕತ್ತಿಗೆ ಸಿಕ್ಕಿ ಸೈನಿಕರೊಬ್ರು ಅಸುನೀಗಿದ್ದಾರೆ. ವಿಶಾಕಪಟ್ಟಣಂ ಮೂಲದ ಕೆ ಕೋಟೆಶ್ವರ್ ರಾವ್ ಅನ್ನೋರು ಕರ್ತವ್ಯ ಮುಗಿಸಿ ವಾಪಸ್ ಮನೆಗೆ ಹೋಗ್ತಿದ್ರು. ಬೈಕ್ನಲ್ಲಿ ಹೋಗ್ತಿದ್ದ ಇವರ ಕತ್ತಿಗೆ, ಮಾರ್ಗಮಧ್ಯೆ ಗಾಳಿಪಟದ ದಾರ ಸುತ್ತುಕೊಂಡಿದೆ. ನಂತರ ಬೈಕಿನ ಕಂಟ್ರೋಲ್ ತಪ್ಪಿ ಕೋಟೆಶ್ವರ್ ರಾವ್ ಕೆಳಗೆ ಬಿದ್ದು ಅಸುನೀಗಿದ್ದಾರೆ. ಅಂದ್ಹಾಗೆ ಈ ದಾರ ಭಾರತದಲ್ಲಿ ಬ್ಯಾನ್ ಆಗಿದ್ರೂ, ಅಕ್ರಮವಾಗಿ ಇದನ್ನ ಮಾರಾಟ ಮಾಡಲಾಗ್ತಿದೆ ಅಂತ ತಿಳಿದು ಬಂದಿದೆ.
-masthmagaa.com
Contact Us for Advertisement