ಬಾದಾಮಿ ಜಿಲ್ಲೆ ಕೆರೂರಿನಲ್ಲಿ ಕೋಮು ಸಂಘರ್ಷ, ಸೆಕ್ಷನ್‌ 144 ಜಾರಿ!

masthmagaa.com:

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಎಂಬ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ ನಡೆದು ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿರೋದು ವರದಿಯಾಗಿದೆ. ಘಟನೆ ಸಂಬಂಧ ಸದ್ಯ ಕೆರೂರಿನಲ್ಲಿ ಸೆಕ್ಷನ್‌ 144 ಜಾರಿ ಮಾಡಲಾಗಿದೆ. ಯುವತಿಯನ್ನ ಚುಡಾಯಿಸಿರುವ ಸಂಬಂಧ ಎರಡು ಕೋಮಿನ ಯುವಕರ ನಡುವೆ ಗಲಾಟೆ ನಡೆದಿದ್ದು ನಂತ್ರ ಅದು ವಿಕೋಪಕ್ಕೆ ತಿರುಗಿದೆ. ಘಟನೆಯಲ್ಲಿ ನಾಲ್ವರಿಗೆ ಗಾಯವಾಗಿದ್ದು ತಳ್ಳುವ ಗಾಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಘಟನೆ ಸಂಬಂಧ ಈಗ 18 ಮಂದಿಯನ್ನ ವಶಕ್ಕೆ ಪಡೆಯಲಾಗಿದೆ. ಯಾವುದೇ ವದಂತಿಗಳಿಗೆ ಗಮನ ನೀಡದೆ ಶಾಂತಿ ಕಾಪಾಡಬೇಕು ಅಂತ ವಿಪಕ್ಷ ನಾಯಕ ಮತ್ತು ಅಲ್ಲಿನ ಶಾಸಕರಾದ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply