masthmagaa.com:
ಬಿಜೆಪಿ ಹಾಗೂ ಬಲಪಂಥೀಯ ನಾಯಕರ ಹತ್ಯೆಗೆ ವಿದೇಶಿಗರೊಂದಿಗೆ ಸೇರಿ ಸಂಚು ರೂಪಿಸಿದ್ದ ಓರ್ವ ಮುಸ್ಲಿಂ ಧರ್ಮಗುರುವನ್ನ ಬಂಧಿಸಿರೊ ಘಟನೆ ಗುಜರಾತ್ನಲ್ಲಿ ನಡೆದಿದೆ. ಸೂರತ್ನ ನೂಲು ತಯಾರಿಕಾ ಫ್ಯಾಕ್ಟರಿಯೊಂದ್ರಲ್ಲಿ ಮ್ಯಾನೇಜರ್ ಆಗಿರೊ ಮೌಲ್ವಿ ಅಬುಬಕರ್ ಟಿಮೊಲ್ ಅನ್ನೊ ಈ ವ್ಯಕ್ತಿ ಬಿಜೆಪಿ ಶಾಸಕ ಎ. ರಾಜಾ ಸಿಂಗ್, ಬಿಜೆಪಿಯ ಮಾಜಿ ವಕ್ತಾರರಾದ ನುಪುರ್ ಶರ್ಮಾ ಹಾಗೂ ಹಿಂದಿ ನ್ಯೂಸ್ ಚಾನಲ್ವೊಂದ್ರ ಚೀಫ್ ಎಡಿಟರ್ ಹತ್ಯೆಗೂ ಸಂಚು ರೂಪಿಸಿದ್ದ. ಈ ವಿಚಾರವಾಗಿ ಈ ಆಸಾಮಿ ಪಾಕ್ ಹಾಗೂ ನೇಪಾಳದ ಹ್ಯಾಂಡ್ಲರ್ಗಳ ಸಹಾಯ ಪಡೆದಿದ್ದ ಅಂತ ಸೂರತ್ನ ಹಿರಿಯ ಪೊಲೀಸ್ ಅಧಿಕಾರಿ ಅನುಪಮ್ ಸಿಂಗ್ ಗೆಹ್ಲೋಟ್ ತಿಳಿಸಿದ್ದಾರೆ. ಅಲ್ದೇ ಈ ಮೌಲ್ವಿ ಮುಸ್ಲಿಂ ಮಕ್ಕಳಿಗೆ ಇಸ್ಲಾಂ ವಿಚಾರವಾಗಿ ಪ್ರೈವೇಟ್ ಟ್ಯುಷನ್ ಬೇರೆ ನೀಡ್ತಿದ್ದ ಎನ್ನಲಾಗಿದೆ.
-masthmagaa.com
Contact Us for Advertisement