ಬೆಂಗಳೂರು ಮೈಸೂರು ದಶಪಥ ಕಾಮಗಾರಿ ಲೋಪದ ಬಗ್ಗೆ ಗಡ್ಕರಿಗೆ ಸಿಎಂ ದೂರು!

masthmagaa.com:

ಕೇಂದ್ರ ಮತ್ತು ರಾಜ್ಯಗಳ ಮಹತ್ವಾಕಾಂಕ್ಷಿ ಯೋಜನೆಯಾದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಕಾಮಗಾರಿಯಲ್ಲಿ ಸಾಕಷ್ಟು ಲೋಪಗಳಿವೆ ಅಂತ ವಿರೋಧ ಪಕ್ಷಗಳು, ಸಾರ್ವಜನಿಕರು ಆಕ್ಷೇಪ ಎತ್ತಿದ್ರು. ಇದ್ರ ಬೆನ್ನಲ್ಲೇ ಈಗ ಕಾಮಗಾರಿಯಿಂದ ಆದ ಅವಾಂತರದ ಬಗ್ಗೆ ಸಿಎಂ ಬೊಮ್ಮಾಯಿ, ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವ್ರಿಗೆ ದೂರು ಕೊಟ್ಟಿದ್ದಾರೆ. ರಸ್ತೆ, ಚರಂಡಿ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಲು ಗುತ್ತಿಗೆದಾರರಿಗೆ ಖಡಕ್‌ ಸೂಚನೆ ನೀಡಬೇಕು ಅಂತ ಅಹವಾಲು ಸಲ್ಲಿಸಿದ್ದಾರೆ.

-masthmagaa.com

Contact Us for Advertisement

Leave a Reply