masthmagaa.com:
ಶ್ರೀಲಂಕಾದಲ್ಲಿರೋ ಅಲ್ಪಸಂಖ್ಯಾತ ತಮಿಳರ ಎಲ್ಲ ಮುಖ್ಯ ಸಮಸ್ಯೆಗಳನ್ನ ನಾವು ಶೀಘ್ರದಲ್ಲೇ ಬಗೆಹರಿಸ್ತೀವಿ ಅಂತ ಅಲ್ಲಿನ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಭರವಸೆ ನೀಡಿದ್ದಾರೆ. ತಮಿಳು ಜನರ ಪ್ರಾಬಲ್ಯ ಇರುವ ವವುನಿಯಾದಲ್ಲಿ ಮಾತನಾಡಿದ ಲಂಕಾ ಅಧ್ಯಕ್ಷರು, ನಾವು ತಮಿಳು ಜನರ ಎಲ್ಲ ಸಮಸ್ಯೆಗಳನ್ನ ಪರಿಹಾರ ಮಾಡೋಕೆ ಬದ್ದರಾಗಿದ್ದೀವಿ..ಮೊದಲು ನಾವು ಜನರ ಅಪನಂಬಿಕೆಯನ್ನು ಹೋಗಲಾಡಿಸಬೇಕು. ಒಮ್ಮೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಕೆ ಪ್ರಾರಂಭಿಸಿದಾಗ ಈ ಅಪನಂಬಿಕೆ ದೂರವಾಗುತ್ತದೆ ಅಂತ ಹೇಳಿದ್ದಾರೆ. ಅಂದ್ಹಾಗೆ ಶ್ರೀಲಂಕಾ ಮುಂದಿನ ವರ್ಷ ತನ್ನ 75ನೇ ವರ್ಷದ ಸ್ವಾತಂತ್ರೋತ್ಸವವನ್ನ ಆಚರಿಸ್ತಿದೆ. ಈ ಹೊತ್ತಲ್ಲಿ ದೇಶದ ಸಾರ್ವಕಾಲಿಕ ಸಮಸ್ಯೆಯಾಗಿರೋ ಈ ತಮಿಳು ಹಾಗೂ ಸಿಂಹಳೀಯರ ನಡುವಿನ ಸಂಘರ್ಷವನ್ನ ಕಡಿಮೆ ಮಾಡೋದಕ್ಕೆ ನಾವು ಕಮ್ಮಿಟ್ ಆಗಿದ್ದೀವಿ ಅಂತ ರಾನಿಲ್ ಸರ್ಕಾರ ಹೇಳ್ತಾಯಿದೆ.
-masthmagaa.com
Contact Us for Advertisement