masthmagaa.com:
ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಅವ್ರ ಕುಟುಂಬ ಸನಾತನ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿದೆ ಅಂತ ಆರೋಪಿಸಿ ಮುಂಬೈನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಪೂರ್ ಕುಟುಂಬ ಕ್ರಿಸ್ಮಸ್ ಆಚರಣೆ ಬಗೆಗಿನ ಕೇಕ್ ಕತ್ತರಿಸುವ ವಿಡೀಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅದ್ರಲ್ಲಿ ರಣಬೀರ್ ಕಪೂರ್ ಕೇಕ್ ಮೇಲೆ ಮದ್ಯ ಸುರಿದು ಅದಕ್ಕೆ ಬೆಂಕಿ ಹಚ್ತಾರೆ. ಆಗ ‘ಜೈ ಮಾತಾ ದಿ’ ಅಂತ ಘೋಷಣೆ ಕೂಗಿದ್ದಾರೆ. ಆ ಬಳಿಕ ಆಲಿಯಾ ಭಟ್, ಅಮಿತಾಬ್ ಬಚ್ಚನ್ ಮೊಮ್ಮೊಗಳು ನವ್ಯಾ ನಂದಾ, ಕರಿಷ್ಮಾ ಕಪೂರ್ ಸೇರಿದಂತೆ ಕಪೂರ್ ಕುಟುಂಬಸ್ಥರು ಕೂಡ ಘೋಷಣೆಗೆ ಧ್ವನಿಗೂಡಿಸಿದ್ದಾರೆ. ಇದರಿಂದ ಮದ್ಯ ಬಳಕೆ ಮಾಡಿ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಅನ್ಯ ಧರ್ಮಿಯರ ಹಬ್ಬವನ್ನ ಆಚರಣೆ ಮಾಡೋವಾಗ ʼಜೈ ಮಾತಾ ದಿʼ ಅಂತ ಘೋಷಿಸಿ ಹಿಂದೂ ಧರ್ಮಕ್ಕೆ ಅವಮಾನಿಸಲಾಗಿದೆ. ಹೀಗಾಗಿ ರಣಬೀರ್ ಮತ್ತು ಕಪೂರ್ ಕುಟುಂಬದ ವಿರುದ್ಧ ಮುಂಬೈನ ಘಾಟ್ಕೋಪರ್ ಪೊಲೀಸ್ ಠಾಣೆಯಲ್ಲಿ ವಕೀಲರಿಬ್ರು ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 295, 509 ಮತ್ತು 34ರ ಅಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಅಂತ FIR ದಾಖಲಿಸಬೇಕು ಅಂತ ಒತ್ತಾಯವೂ ಕೇಳಿ ಬಂದಿದೆ ಅಂತ ಹೇಳಲಾಗ್ತಿದೆ. ರಣಬೀರ್ ನಡೆಗೆ ಸೋಶಿಯಲ್ ಮೀಡಿಯಾದಲ್ಲೂ ವ್ಯಾಪಕ ಟೀಕೆ ವ್ಯಕ್ತವಾಗಿದೆ.
-masthmagaa.com
Contact Us for Advertisement