ಬಾಯಿತಪ್ಪಿದ ರಾಹುಲ್‌ ಗಾಂಧಿ: ತಿರುಮಂತ್ರವಾದ ಅದಾನಿ ಅಸ್ತ್ರ

masthmagaa.com:

ಭಾಷಣದ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಬಾಯಿ ತಪ್ಪಿ ಕಾಂಗ್ರೆಸ್‌ ಸಿಎಂಗಳು ಅದಾನಿಗಾಗಿ ಕೆಲಸ ಮಾಡ್ತಾರೆ ಅಂತೇಳಿ ಪೇಚಿಗೆ ಸಿಲುಕಿದ್ದಾರೆ. ಚುನಾವಣೆ ಅನೌನ್ಸ್‌ ಆಗಿರೊ ಛತ್ತೀಸ್‌ಘಡದಲ್ಲಿ ನಿನ್ನೆ ನಡೆದ ಕಾಂಗ್ರೆಸ್‌ ರ‍್ಯಾಲಿ ವೇಳೆ ಮಾತನಾಡುವಾಗ ರಾಹುಲ್‌ ಈ ಅವಾಂತರ ಮಾಡ್ಕೊಂಡಿದ್ದಾರೆ. “ನೀವು ಅದಾನಿಗಾಗಿ 24*7 ಕೆಲಸ ಮಾಡ್ತೀರ. ಇಲ್ಲಿನ ಮುಖ್ಯಮಂತ್ರಿ ಸಹ ಅದಾನಿಯಂತಹ ವ್ಯಕ್ತಿಗಳಿಗೆ ಕೆಲಸ ಮಾಡ್ತಿದ್ದಾರೆ. ಆದ್ರೆ ನಾವು ರೈತರಿಗಾಗಿ, ಸಣ್ಣ ವ್ಯಾಪಾರಿಗಳಿಗೆ ಕೆಲಸ ಮಾಡ್ತೇವೆ. ನಮಗೂ ನಿಮಗೂ ಇರುವ ವ್ಯತ್ಯಾಸ ಇಷ್ಟೇ” ಅಂದಿದ್ದಾರೆ. ಇದರಿಂದ ವೇದಿಕೆ ಮೇಲಿದ್ದ ಛತ್ತೀಸ್‌ಘಡ್‌ ಸಿಎಂ ಭೂಪೇಶ್‌ ಬಗೇಲ್‌ ಮುಜುಗರಕ್ಕೀಡಾಗಿದ್ದಾರೆ. ರಾಹುಲ್‌ ಬಾಯಿ ತಪ್ಪೋದನ್ನೇ ಎದುರು ನೋಡ್ತಿದ್ದ ಬಿಜೆಪಿಗರು, ಸಿಕ್ಕಿದ್ದೇ ಚಾನ್ಸ್‌ ಅಂತ “ಛತ್ತೀಸ್‌ಘಡ್‌ ಸಿಎಂ ಅದಾನಿಗಾಗಿ ಕೆಲ್ಸ ಮಾಡೋದನ್ನ ರಾಹುಲ್‌ ಒಪ್ಪಿಕೊಂಡಿದ್ದಾರೆ. ಕೊನೆಗೂ ಸತ್ಯ ಆಚೆ ಬರ್ತಿದೆ” ಅಂತ ವ್ಯಂಗ್ಯ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply