masthmagaa.com:
ನಶಾವಸ್ತು ಕಳ್ಳಸಾಗಾಣೆ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವ ಅರೋಪದ ಮೇಲೆ ಪಂಜಾಬ್ನ ಕಾಂಗ್ರೆಸ್ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಅನ್ನೋರನ್ನ ಅರೆಸ್ಟ್ ಮಾಡಲಾಗಿದೆ. ಚಂಡೀಗಢದಲ್ಲಿರುವ ಅವರ ನಿವಾಸದಲ್ಲಿ ಬಂಧಿಸಲಾಗಿದ್ದು, ಈ ವೇಳೆ ಭಾರೀ ಹೈಡ್ರಾಮಾ ನಡೆದಿದೆ. ಬಂಧನಕ್ಕೂ ಮೊದಲು ಖೈರಾ ಅವರು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಜೊತೆಗೆ ಫೇಸ್ಬುಕ್ ಲೈವ್ ಮೂಲಕ ಬಂಧನದ ವೇಳೆ ನಡೆದ ಘಟನೆಯನ್ನು ಜನರಿಗೆ ತೋರಿಸಿದ್ದಾರೆ. ಅಲ್ದೆ ಪಂಜಾಬ್ ಸಿಎಂ ಭಗವಂತ್ ಮಾನ್ ತಮ್ಮ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಅಂತ ಆರೋಪಿಸಿದ್ದಾರೆ. ಇತ್ತ ಖೈರಾ ಅವರ ಬಂಧನವನ್ನ ಅಲ್ಲಿನ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸೊಇಂಗ್ ರಾಜಾ ಖಂಡಿಸಿದ್ದಾರೆ. ರಾಜಕೀಯ ಸೇಡಿಗಾಗಿ ಖೈರಾ ಅವರನ್ನು ಬಂಧಿಸಲಾಗಿದೆ. ಇದು ಪ್ರತಿಪಕ್ಷಗಳನ್ನು ಬೆದರಿಸುವ ಪ್ರಯತ್ನ ಅಂತ ಅಮರಿಂದರ್ ಅರೋಪಿಸಿದ್ದಾರೆ. ಅಂದ್ಹಾಗೆ ಮುಂಬರುವ ಲೋಕಸಭೆಯಲ್ಲಿ ಬಿಜೆಪಿಯನ್ನ ಏನಾದ್ರು ಮಾಡಿ ಸೋಲಿಸಬೇಕು ಅಂತ ತಯಾರಿ ನಡೆಸುತ್ತಿರುವ ವಿಪಕ್ಷಗಳ ಒಕ್ಕೂಟ ಇಂಡಿಯಾಗೆ ಇದ್ರಿಂದ ಹೊಡೆತ ಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.
-masthmagaa.com
Contact Us for Advertisement