masthmagaa.com:
ಸನಾತನ ಧರ್ಮವನ್ನ ನಿರ್ಮೂಲಮಾಡೋ ಕುರಿತು ಪ್ರಚೋದನಾಕಾರಿ ಹೇಳಿಕೆ ಕೊಟ್ಟಿದ್ದ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವ್ರ ಹೇಳಿಕೆಗೆ ಸಂಬಂಧಿಸಿ ಮದ್ರಾಸ್ ಹೈಕೋರ್ಟ್ ಅಲ್ಲಿನ ಪೊಲೀಸರನ್ನ ತರಾಟೆಗೆ ತೆಗೆದುಕೊಂಡಿದೆ. ʻತಮಿಳುನಾಡಿನ ಡಿಎಮ್ಕೆ ಮಿನಿಸ್ಟರ್ ವಿರುದ್ಧ ಕ್ರಮ ತೆಗೆದುಕೊಳ್ಳೋದಕ್ಕೆ ಪೊಲೀಸರು ಸೋತಿದ್ದಾರೆ. ಯಾವುದೇ ಸಿದ್ಧಾಂತಗಳನ್ನ ನಿರ್ಮೂಲನೆ ಮಾಡಲು ಮತ್ತು ಸಮಾಜವನ್ನ ಒಡೆಯುವ ಹಕ್ಕು ಯಾರಿಗೂ ಇಲ್ಲ. ಸಮಾಜವನ್ನ ಡಿವೈಡ್ ಮಾಡುವಂತಹ ಹೇಳಿಕೆಗಳನ್ನ ಕೊಡೋ ಮುಂಚೆ ಅಧಿಕಾರದಲ್ಲಿರೋರು ಯೋಚಿಸಬೇಕು. ಇದ್ರಿಂದಾಗುವ ಅಪಾಯದ ಬಗ್ಗೆ ಜವಾಬ್ದಾರಿಯನ್ನ ವಹಿಸಬೇಕು. ಜಾತಿ, ಧರ್ಮ ಹಾಗೂ ಸಿದ್ದಾಂತಗಳ ವಿಚಾರದಲ್ಲಿ ಸಮಾಜದ ಜನರನ್ನ ಡಿವೈಡ್ ಮಾಡೋ ಕೆಲಸವನ್ನ ಮಾಡಬಾರದುʼ ಅಂತ ಮದ್ರಾಸ್ ಹೈಕೋರ್ಟ್ನ ನ್ಯಾಯಾಧೀಶ ಜಿ. ಜಯಚಂದ್ರನ್ ಕಿಡಿಕಾರಿದ್ದಾರೆ.
-masthmagaa.com
Contact Us for Advertisement