masthmagaa.com:
ಕೋವಿಶೀಲ್ಡ್ ಲಸಿಕೆ ಹಾಕಿಕೊಳ್ಳೊ ವಿಚಾರವಾಗಿ ಚಿಕ್ಕಬಳ್ಳಾಪುರ ಕಾನೂನು ಮಹಾವಿದ್ಯಾಲಯವೊಂದು ವಿವಾದಾತ್ಮಕ ಪ್ರಕಟಣೆ ಹೊರಡಿಸಿದೆ. ʻಈ ಲಸಿಕೆ ಹಾಕಿಸಿಕೊಂಡಿರೊ ಪರಿಣಾಮ ರಕ್ತ ಹೆಪ್ಪು ಗಟ್ಟಿ.. ದಿಢೀರ್ ಹೃದಯಾಘಾತ ಸಂಭವಿಸಿ ಪ್ರಾಣ ಕಳ್ಕೊಬಹುದು ಅಂತ ವರದಿಯಾಗ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರು ಫ್ರಿಡ್ಜ್ ನೀರು, ಕೋಲ್ಡ್ ಡ್ರಿಂಕ್ಸ್ಗಳನ್ನ ಕುಡಿಬಾರ್ದು. ಐಸ್ ಕ್ರೀಮ್ಗಳನ್ನ ತಿನ್ನಬಾರ್ದುʼ ಅಂತೇಳಿ ಅಲ್ಲಿನ ಸಿದ್ದರಾಮಯ್ಯ ಲಾ ಕಾಲೇಜಿನ ಪ್ರಿನ್ಸಿಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದು, ಸದ್ಯ ಈ ವಿಚಾರ ಎಲ್ಲೆಡೆ ತೀವ್ರ ಚರ್ಚೆಗೆ ಕಾರಣವಾಗಿದೆ. ಸಾಕಷ್ಟು ಜನ ಇದಕ್ಕೆ ಟೀಕೆ ವ್ಯಕ್ತಪಡಿಸಿದ್ದಾರೆ. ಇದ್ರ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ನಾವು ಇಂತಹ ಯಾವುದೇ ವರದಿ ಬಗ್ಗೆ ಸುತ್ತೋಲೆ ಹೊರಡಿಸಿಲ್ಲ ಅಂತ ಸ್ಪಷ್ಠೀಕರಣ ನೀಡಿದೆ.
-masthmagaa.com
Contact Us for Advertisement