masthmagaa.com:
ಭಾರತದ ಕರಾವಳಿಯನ್ನ ಅಪ್ಪಳಿಸಲಿರುವ ಬಿಪರ್ಜಾಯ್ ಚಂಡಮಾರುತ ಇಂದು ಪಾಕ್ಗೂ ಅಪ್ಪಳಿಸಲಿದೆ. ಅಲ್ಲಿನ ಸಿಂಧ್ ಪ್ರಾಂತ್ಯದ ಕೇಟಿ ಬಂದರಿಗೆ ಚಂಡಮಾರುತ ಅಪ್ಪಳಿಸುತ್ತೆ ಅಂತ ಅಲ್ಲಿನ ಕ್ಲೈಮೇಟ್ ಎನರ್ಜಿ ಮಿನಿಸ್ಟರ್ ಶೆರ್ರಿ ರೆಹಮಾನ್ ಹೇಳಿದ್ದಾರೆ. ಜೊತೆಗೆ ಈಗಾಗಲೇ ಆ ಭಾಗದಲ್ಲಿರುವ ಸುಮಾರು 66 ಸಾವಿರ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಅಲ್ದೇ ರಕ್ಷಣಾ ಸಂಸ್ಥೆಗಳು ಕೂಡ ರೆಡಿಯಾಗಿವೆ ಅಂತ ತಿಳಿಸಿದ್ದಾರೆ.
-masthmagaa.com
Contact Us for Advertisement