ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ಸೈರಸ್‌ ಮಿಸ್ತ್ರಿ ಅಪಘಾತದಲ್ಲಿ ಸಾವು

masthmagaa.com:

ಭಾರತದ ಉದ್ಯಮ ವಲಯಕ್ಕೆ ಆಘಾತಕಾರಿ ಸುದ್ದಿಯೊಂದು ಬಂದೆರಗಿದೆ. ಟಾಟಾ ಸಮೂಹಗಳ ಮಾಜಿ ಚೇರ್ಮನ್‌ ಆಗಿದ್ದ ಮತ್ತು ಉದ್ಯಮವಲಯದಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದ ಸೈರಸ್‌ ಮಿಸ್ತ್ರಿ ಅವ್ರು ಕಾರ್‌ ಅಪಘಾತದಲ್ಲಿ ಬಲಿಯಾಗಿದ್ದಾರೆ. ಮುಂಬೈನ ಪಾಲ್‌ಘರ್‌ ಸಮೀಪ ಅಪಘಾತ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಸೈರಸ್‌ ಮಿಸ್ತ್ರಿ ಅವರು ಗುಜರಾತ್‌ನ ಅಹಮದಾಬಾದ್‌ನಿಂದ ಮುಂಬಯಿಗೆ ಪ್ರಯಾಣಿಸುತ್ತಿದ್ದರು. ಸೂರ್ಯ ನದಿಯ ಮೇಲೆ ನಿರ್ಮಿಸಲಾಗಿರುವ ಸೇತುವೆಯಲ್ಲಿ ಅಪಘಾತ ಸಂಭವಿಸಿದೆ. ಮಧ್ಯಾಹ್ನ 3:15ರ ಸುಮಾರಿಗೆ ಅಪಘಾತವಾಗಿದೆ. ಅದು ಅಪಘಾತದ ರೀತಿಯೇ ಕಾಣುತ್ತಿದೆ, ಅಂತ ಪೊಲೀಸರು ತಿಳಿಸಿದ್ದಾರೆ. ಕಾರಿನ ಚಾಲಕ ಮತ್ತು ಮಿಸ್ತ್ರಿ ಅವರೊಂದಿಗೆ ಪ್ರಯಾಣಿಸುತ್ತಿದ್ದ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದು ಅವರನ್ನ ಗುಜರಾತ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಲ್ಲೊಂಜಿ ಮಿಸ್ತ್ರಿ ಅನ್ನೋ ಪಾರ್ಸಿ ಉದ್ಯಮ ಕುಟುಂಬಕ್ಕೆ ಸೇರಿದ್ದ ಇವ್ರು ಟಾಟಾ ಕುಟುಂಬದೊಂದಿಗೆ ಹಲವಾರು ವ್ಯಾಪಾರ ಸಂಬಂಧ ಹೊಂದಿದ್ರು. ಹೀಗಾಗಿ ಈ ಹಿಂದೆ ಟಾಟಾ ಗ್ರೂಪ್‌ನ ಚೇರ್ಮನ್‌ ಆಗಿ ಕೂಡ ನೇಮಕ ಮಾಡಲಾಗಿತ್ತು. ಆದ್ರೆ ನಂತ್ರ ಇವ್ರ ಬ್ಯುಸಿನೆಸ್‌ ತಂತ್ರಗಾರಿಕೆಗಳು ಸರಿ ಹೋಗ್ತಿಲ್ಲ ಅಂತ ಟಾಟಾದಿಂದ ಇವ್ರನ್ನ ಹೊರಹಾಕಲಾಗಿತ್ತು. ಇದ್ರ ವಿರುದ್ಧ ಮಿಸ್ತ್ರಿ ಸುದೀರ್ಘ ಕಾನೂನು ಹೋರಾಟ ಕೂಡ ನಡೆಸಿದ್ರು.

-masthmagaa.com

Contact Us for Advertisement

Leave a Reply