ನನ್ನ ವಿರುದ್ಧ ತನಿಖೆ ಹೊಸದೇನಲ್ಲ: ಕೇಜ್ರಿವಾಲ್‌

masthmagaa.com:

ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಬಂಗಲೆ ನವೀಕರಣ ಅವ್ಯವಹಾರ ತನಿಖೆಯನ್ನ ಕೇಂದ್ರ ಸರ್ಕಾರ ಸಿಬಿಐಗೆ ವಹಿಸಿರೋದನ್ನ ಕೇಜ್ರಿವಾಲ್‌ ಸ್ವಾಗತಿಸಿದ್ದಾರೆ. ಈ ನಿವಾಸದ ನವೀಕರಣದಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಹಾಗಾಗಿ ಅವರಿಗೆ ಏನು ಸಿಗುವುದಿಲ್ಲ ಅಂತ ಹೇಳಿದ್ದಾರೆ. ಈ ತನಿಖೆ ಪ್ರಧಾನಿಯವರ ಆತಂಕ ತೋರಿಸುತ್ತೆ. ಒಂದು ವೇಳೆ ತನಿಖೆಯಲ್ಲಿ ಏನೂ ಹೊರಬರದಿದ್ದರೆ ನರೇಂದ್ರ ಮೋದಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರ? ಅಂತ ಪ್ರಶ್ನಿಸಿದ್ದಾರೆ. ಅಲ್ದೆ ನನ್ನ ವಿರುದ್ಧ ತನಿಖೆ ಹೊಸದೇನಲ್ಲ. ಕಳೆದ ಎಂಟು ವರ್ಷಗಳಲ್ಲಿ 50ಕ್ಕೂ ಹೆಚ್ಚು ತನಿಖೆಗಳು ನನ್ನ ವಿರುದ್ಧ ನಡೆದಿವೆ ಅಂತ ವಾಗ್ದಾಳಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply