ಗಗನಸಖಿ ಆತ್ಮಹತ್ಯೆ ಕೇಸ್‌, ಮಾಜಿ ಸಚಿವ ಗೋಪಾಲ್ ಕಾಂಡ ಖುಲಾಸೆ!

masthmagaa.com:

ಮಾಜಿ ಗಗನಸಖಿ ಗೀತಿಕಾ ಶರ್ಮಾ ಅನ್ನೋರ ಆತ್ಮಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ಹರಿಯಾಣದ ಮಾಜಿ ಸಚಿವ ಗೋಪಾಲ್ ಕಾಂಡ ಅವ್ರನ್ನ ದೆಹಲಿ ಕೋರ್ಟ್‌ ಖುಲಾಸೆಗೊಳಿಸಿದೆ. ಗೋಪಾಲ್ ಕಾಂಡ ಅವರ MLDR ಏರ್‌ಲೈನ್ಸ್‌ನ ಮಾಜಿ ಗಗನಸಖಿ, ನಂತರ ಅವರ ಕಂಪನಿಯೊಂದರ ನಿರ್ದೇಶಕರಾಗಿ ಬಡ್ತಿ ಹೊಂದಿದ್ದ ಗೀತಿಕಾ ಶರ್ಮಾ, ಆಗಸ್ಟ್ 5, 2012 ರಂದು ಅವ್ರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಡೆತ್‌ನೋಟ್‌ನಲ್ಲಿ ಗೋಪಾಲ್ ಕಾಂಡ ಮತ್ತು ಅರುಣಾ ಚಡ್ಡಾ ಅವರ ಕಿರುಕುಳದಿಂದ ತನ್ನ ಜೀವನವನ್ನು ಕೊನೆಗೊಳಿಸುತ್ತಿರುವುದಾಗಿ ಹೇಳಿದ್ದರು. ಆದ್ರೆ ಈಗ ಕೋರ್ಟ್‌ ಇವರನ್ನ ಖುಲಾಸೆಗೊಳಿಸಿದೆ.

-masthmagaa.com

Contact Us for Advertisement

Leave a Reply