`ದೆಹಲಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಫ್ರೀ ಬಸ್‌ ಪಾಸ್ ‘: ಸಿಎಂ‌ ಕೇಜ್ರಿ ವಾಲ್

masthmagaa.com:

ದೆಹಲಿಯ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್‌ ಕೊಡಲಾಗುತ್ತೆ ಅಂತ ದೆಹಲಿ ಸರ್ಕಾರ ಘೋಷಿಸಿದೆ. ಕಟ್ಟಡ ಕಾರ್ಮಿಕರಿಗೆ ಓಡಾಟ ಸುಲಭವಾಗಲಿ ಅಂತ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಅಂತ ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಹೇಳಿದ್ದಾರೆ. ಅಂದಹಾಗೆ ಈಗಾಗಲೆ ಈ ಸೌಲಭ್ಯವನ್ನ ಪಡೆಯಲು 10 ಲಕ್ಷ ಜನ ತಮ್ಮ ಹೆಸರನ್ನ ನೋಂದಾಯಿಸಿಕೊಂಡಿದ್ದಾರೆ. ಇದಕ್ಕೆ 600ಕೋಟಿಯಷ್ಟು ಹಣ ಖರ್ಚಾಗುತ್ತೆ ಅಂತಲು ಸಿಸೋಡಿಯಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply